Advertisement

ಬೇಹು ಬಳಿಕ ಭಾರತದ ವಿರುದ್ಧ ಜೈವಿಕ ಯುದ್ಧಕ್ಕೆ ಚೀನ ಸಿದ್ಧತೆ

03:29 AM Sep 16, 2020 | Hari Prasad |

ಹೊಸದಿಲ್ಲಿ/ಬೀಜಿಂಗ್‌: ದೇಶದ 10 ಸಾವಿರಕ್ಕೂ ಅಧಿಕ ಪ್ರಮುಖರ ಮೇಲೆ ಬೇಹುಗಾರಿಕೆ ನಡೆಸಿರುವ ಚೀನ ಈಗ ಜೈವಿಕ ಯುದ್ಧ ನಡೆಸಲು ಮುಂದಾಗಿದೆ.

Advertisement

ಚೀನದ ಸನ್ಮಿತ್ರ ರಾಷ್ಟ್ರ ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಜಗತ್ತಿನ ವ್ಯವಸ್ಥೆ ಹಳಿತಪ್ಪಿಸಿದ ವುಹಾನ್‌ ಇನ್ಸ್ಟಿಟ್ಯೂಟ್‌ ಆಫ್ ವೈರಾಲಜಿ ಜತೆಗೂಡಿ ಪ್ರಬಲ ರೋಗಕಾರಕಗಳ ಅಭಿವೃದ್ಧಿ ಬಗ್ಗೆ ಸಂಶೋಧನೆ ನಡೆಸುತ್ತಿವೆ.

ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ “ದ ಕ್ಲಾಕ್ಸನ್‌’ ನಡೆಸಿರುವ ಅಧ್ಯಯನದಲ್ಲಿ ಗೊತ್ತಾಗಿದೆ. ಈ ವರ್ಷದ ಆರಂಭದಲ್ಲಿಯೇ ಸಂಸ್ಥೆ ಈ ಬಗ್ಗೆ ಎರಡೂ ರಾಷ್ಟ್ರಗಳ ದುಸ್ಸಾಹಸದ ಬಗ್ಗೆ ವರದಿ ನೀಡಿತ್ತು.

2,800ಕ್ಕೂ ಅಧಿಕ ಒಂಟೆಗಳು, 7 ಸಾವಿರಕ್ಕೂ ಅಧಿಕ ಮಂದಿ ರೈತರ ಮೇಲೆ ‘ಪ್ರಾಣಿಗಳಿಂದ ಮಾನವರಿಗೆ’ ವರ್ಗಾವಣೆಯಾಗುವ ಹಾನಿಕಾರಕ ರೋಗಕಾರಕಗಳನ್ನು ಪ್ರಯೋಗಿಸುವ ಬಗ್ಗೆ ಸಂಶೋಧನೆ ನಡೆಸುವಲ್ಲಿ ನಿರತವಾಗಿದೆ ಎಂದು ವರದಿ ಹೇಳಿದೆ.

ಜಗತ್ತಿಗೆ ಕೋವಿಡ್ 19 ಸೋಂಕನ್ನು ನೀಡಿದ ವುಹಾನ್‌ನ ಲ್ಯಾಬ್‌ನ ವಿಜ್ಞಾನಿಗಳು 2015ರಿಂದಲೇ ಈ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಈ ಪೈಕಿ ಜಗತ್ತಿನ ಐದು ಮಾರಣಾಂತಿಕ ರೋಗಕಾರಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಚೀನ ಮತ್ತು ಪಾಕ್‌ ನಡೆಸಿದ ಅಧ್ಯಯನ ‘ವೆರೋ ಸೆಲ್‌’ಗಳನ್ನು ಆಧರಿಸಿದ್ದಾಗಿದೆ. ಈ ಅಧ್ಯಯನವೆಲ್ಲವೂ ಚೀನ- ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ವ್ಯಾಪ್ತಿಯ ಮಿತಿಯಲ್ಲಿ ನಡೆದಿದೆ.

Advertisement

ಹೈಬ್ರಿಡ್‌ ಸಮರ: ಭದ್ರತಾ ಸಂಸ್ಥೆಗಳಿಂದ ಪರಿಶೀಲನೆ
ಚೀನದ ಹೈಬ್ರಿಡ್‌ ಸಮರದ ಮಾಹಿತಿ ಹೊರಬೀಳುತ್ತಿದ್ದಂತೆಯೇ ಭದ್ರತಾ ಸಂಸ್ಥೆಗಳು ಜಾಗೃತಗೊಂಡಿವೆ. ಭಾರತದ 10 ಸಾವಿರಕ್ಕೂ ಅಧಿಕ ಮಂದಿಯ ದತ್ತಾಂಶವನ್ನು ಚೀನ ಸಂಗ್ರಹಿಸುವ ಕುರಿತು ಈ ಸಂಸ್ಥೆಗಳು ಮಾಹಿತಿ ಕಲೆಹಾಕಲು ಆರಂಭಿಸಿವೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ಗೆ ಈ ಕುರಿತು ವರದಿ ನೀಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಸ್ವಿಗ್ಗಿ, ಜೊಮ್ಯಾಟೋ ಮೇಲೂ ಕಣ್ಣು: ಇದೇ ವೇಳೆ, ದೇಶದ ಪಾವತಿ ಮತ್ತು ಆಹಾರ ಪೂರೈಕೆ ಆ್ಯಪ್‌ಗ್ಳಾಗಿರುವ ಪೇಟಿಎಂ, ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ 1,400 ಕಂಪೆನಿಗಳ ಮೇಲೆ ಕೂಡ ಚೀನದ ಝೆನುÏವಾ ಕಂಪೆನಿ ನಿಗಾ ಇರಿಸಿದ ಮಾಹಿತಿ ಬಹಿರಂಗಗೊಂಡಿದೆ. ಸಂಸ್ಥೆಯ ಆಯಕಟ್ಟಿನ ಹುದ್ದೆಯಲ್ಲಿರುವವರು, ಅವುಗಳಲ್ಲಿ ಹೂಡಿಕೆ ಮಾಡಿರುವವರು ಸೇರಿದಂತೆ ಪ್ರಮುಖರ ಮೇಲೆ ನಿಗಾ ಇರಿಸಲಾಗಿದೆ. ಯೂಬರ್‌ ಇಂಡಿಯಾ, ಪೆಯು, ಫ್ಲಿಪ್‌ಕಾರ್ಟ್‌, ನಯ್‌ಕಾ, ಫೋನ್‌ ಪೆ, ಬಿಗ್‌ಬಾಸ್ಕೆಟ್‌ನ ಮಾಹಿತಿಗಳನ್ನೂ ಚೀನ ಸಂಗ್ರಹಿಸಿರುವುದು ಗೊತ್ತಾಗಿದೆ.

ಅಲಿಬಾಬಾದಿಂದ ಮಾಹಿತಿ ಕಳವು: ಚೀನದ ಇ-ಕಾಮರ್ಸ್‌ ದೈತ್ಯ ಅಲಿಬಾಬಾ ಭಾರತದಲ್ಲಿ ಹೊಂದಿರುವ 72 ಸರ್ವರ್‌ಗಳು ದೇಶದ ಗ್ರಾಹಕರ ಬಳಕೆದಾರರ ಮಾಹಿತಿ ಕಳವು ಮಾಡುತ್ತಿವೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ. ಈ ವರದಿ ಆಧರಿಸಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next