Advertisement

ತಾಲಿಬಾನ್ ಸಂಸ್ಕೃತಿ ಕಾಂಗ್ರೆಸ್ ನವರದ್ದು: ಮಹೇಶ್ ಟೆಂಗಿನಕಾಯಿ ಕಿಡಿ

01:47 PM Sep 29, 2021 | Team Udayavani |

ಚಿಕ್ಕೋಡಿ: ತಾಲಿಬಾನ್ ಸಂಸ್ಕೃತಿಯನ್ನು  ಹಿಂಬಾಲಿಸುವುದು ಕಾಂಗ್ರೆಸ್. ದ್ವಂದ್ವ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಬರುವ ದಿನಗಳಲ್ಲಿ ಬಿಜೆಪಿ ತಕ್ಕ ಪಾಠ ಕಲಿಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೇಂಗಿನಕಾಯಿ ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದರು.

Advertisement

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಭೂತ ಮಟ್ಟದ ಅಧ್ಯಕ್ಷರಾದ ಏಕನಾಥ ಜೇಧೆ ಮನೆಗೆ ನಾಮಫಲಕ ಅಳವಡಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲಿಬಾನ್ ಸಂಸ್ಕೃತಿ ಹೊಂದಿದ್ದವರ ಬಾಯಿಯಲ್ಲಿ ಇಂತಹ ಮಾತುಗಳು ಬರುತ್ತಿವೆ. ತಾಲಿಬಾನ್ ಹೇಳಿಕೆ ಕೊಡುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ಕೊಡುತ್ತಿರುವುದು ಸ್ಪತಃ ಗೊತ್ತಾಗುತ್ತದೆ. ಬರುವ ದಿನಗಳಲ್ಲಿ ದೇಶದ ಜನ ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ ಎಂದರು.

ಪರಿಷತ್ ಮತ್ತು ಎರಡು ಕ್ಷೇತ್ರದ ಉಪಚುನಾವಣೆ ಮುಗಿದ ಬಳಿಕ ಜಿಪಂ ತಾಪಂ ಚುನಾವಣೆಯನ್ನು ಬಿಜೆಪಿ ಎದುರಿಸಲಿದೆ ಎಂದರು.

ಇದನ್ನೂ ಓದಿ:8 ಲಕ್ಷಕ್ಕೆ ಮಾರಾಟವಾದ ಕಿಲಾರಿ ಜೋಡೆತ್ತು

ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಕ್ಕಲಕೋಟ, ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ , ಚಿಕ್ಕೋಡಿ ಜಿಲ್ಲಾ ಪ್ರಭಾರಿ ರಾಜು ಕುರಡಗಿ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ ರಾಜೇಶ ನೆರ್ಲಿ , ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಜಗದೀಶ್ ಕವಟಗಿಮಠ, ಹೆಸ್ಕಾಂ ನಿರ್ದೇಶಕರು ಮಹೇಶ್ ಭಾತೆ, ಚಿಕ್ಕೋಡಿ ಬಿಜೆಪಿ ಮಹಿಳಾ ಜಿಲ್ಲಾ ಅಧ್ಯಕ್ಷ ಶಾಂಭವಿ ಅಶ್ವಥಪುರ,  ಚಿಕೊಡಿ ಜಿಲ್ಹಾ ಮಹಿಳಾ  ಪ್ರಧಾನ ಕಾರ್ಯದರ್ಶಿ

Advertisement

ಶ್ರೀಮತಿ ಗೀತಾ ಭಾತೆ, ಗ್ರಾ ಪ ಅಧ್ಯಕ್ಷ  ಸಾವಿತ್ರಿ ಏಕನಾಥ ಜೇಧೆ, ವಿಜಯ ಕೋಠಿವಾಲೆ. ಮಹಾಂತೇಶ ಭಾತೆ. ಸಂಜಯ ಕಾಂಬಳೆ. ಅಶೋಕ ಶಿಂಗಾಯಿ. ಏಕನಾಥ ಜೇಧೆ. ಮಹೇಶ ಚೌಡನ್ನವರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next