Advertisement

Chikkamagaluru; ಶಾಲೆಯಲ್ಲಿದ್ದ ಒಬ್ಬರೇ ಶಿಕ್ಷಕ ವರ್ಗಾವಣೆ; ವಿದ್ಯಾರ್ಥಿ-ಪೋಷಕರ ಪ್ರತಿಭಟನೆ

03:09 PM Sep 02, 2024 | Team Udayavani |

ಚಿಕ್ಕಮಗಳೂರು: ಶಾಲೆಯಲ್ಲಿದ್ದ ಒಬ್ಬರೇ ಶಿಕ್ಷಕರು ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ, ಟೀಚರ್ ಇಲ್ಲವೆಂದು ಮಕ್ಕಳು ಮತ್ತು ಪೋಷಕರು ಬಿಇಓ ಕಚೇರಿ ಮುಂದೇ ಕೂತಿರುವ ಘಟನೆ ಸೋಮವಾರ (ಸೆ.02) ಜಿಲ್ಲೆಯಲ್ಲಿ ನಡೆದಿದೆ.

Advertisement

ಚಿಕ್ಕಮಗಳೂರು ತಾಲೂಕು ಮೇಲಿನ ಹುಲುವತ್ತಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂಬತ್ತು ವಿದ್ಯಾರ್ಥಿಗಳು ಇದ್ದು ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿದ್ದರು. ಈಗ ಆ ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ. ಬೇರೆ ಶಿಕ್ಷಕರು ಬರಲು ಇನ್ನೂ ಹದಿನೈದು ದಿನ ಬೇಕು ಎಂದು ಹೇಳಲಾಗುತ್ತಿದೆ. ಹೊಸ ಶಿಕ್ಷಕರು ಬರುವ ಮುನ್ನವೇ ಇದ್ದ ಶಿಕ್ಣಕರನ್ನು ಹೇಗೆ ರಿಲೀವ್ ಮಾಡಿದ್ದೀರಿ ಎಂದು ವಿದ್ಯಾರ್ಥಿಗಳ ಪೋಷಕರು ಪ್ರಶ್ನಿಸಿದ್ದಾರೆ.

ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಂಬತ್ತು ವಿದ್ಯಾರ್ಥಿಗಳು ಇದ್ದು ಅವರಿಗೆ ಪಾಠ ಮಾಡುವವರು ಯಾರು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next