Advertisement

ಚಿಕ್ಕಮಗಳೂರು ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್ : ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

05:34 PM Sep 10, 2020 | sudhir |

ಚಿಕ್ಕಮಗಳೂರು : ಖಾಸಗಿ ಬಸ್ಸು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಸಾವನ್ನಪಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಅಮೃತ್ ಮಹಲ್ ಬಳಿ ಗುರುವಾರ ನಡೆದಿದೆ.

Advertisement

ಮೃತರನ್ನು ಕಿರಣ್ 26 ಹಾಗೂ ನಾಗರಾಜ್ ನಾಯ್ಕ್ 30 ಎಂದು ತಿಳಿದುಬಂದಿದೆ.

ತರೀಕೆರೆಯಿಂದ ಲಿಂಗದಹಳ್ಳಿಗೆ ಕಡೆಗೆ ಬರುತ್ತಿದ್ದ ಬಸ್ಸಿಗೆ ಎದುರಿನಿಂದ ಬರುತ್ತಿದ್ದ ಬೈಕ್ ನೇರವಾಗಿ ಡಿಕ್ಕಿ ಹೊಡೆದಿದೆ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ಡಿಕ್ಕಿ ಹೊಡೆದಿರಬಹುದು ಎನ್ನಲಾಗಿದ್ದು, ಬಸ್ಸು ಚಾಲಕ ಅಪಘಾತವನ್ನು ತಪ್ಪಿಸುವ ಭರದಲ್ಲಿ ತೀರಾ ಎಡ ಬದಿಗೆ ಬಂದಿದ್ದು ಆದರೂ ಬೈಕ್ ಸವಾರರನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಪರಿಣಾಮ ಬಸ್ಸು ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಇದನ್ನೂ ಓದಿ : ಅಕ್ರಮ ಗಾಂಜಾ ಮಾರಾಟ ವ್ಯಕ್ತಿಯ ಬಂಧನ ! ಬಂಧಿತನಿಂದ 1ಕೆ.ಜಿ 280 ಗ್ರಾಂ ಗಾಂಜಾ ವಶ

Advertisement

ಘಟನೆಗೆ ಸಂಬಂಧಿಸಿ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next