Advertisement

Vinay Guruji: ಅಣ್ಣಾಮಲೈ ಮುಂದೊಂದು ದಿನ ತಮಿಳುನಾಡು ಸಿಎಂ ಆಗುತ್ತಾರೆ!

06:39 PM Jan 28, 2024 | Team Udayavani |

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸಿದ್ದ, ಸದ್ಯ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೆ.ಅಣ್ಣಾಮಲೈ ಮುಂದೊಂದು ದಿನ ತಮಿಳುನಾಡು ಮುಖ್ಯಮಂತ್ರಿಯಾಗುತ್ತಾರೆ ಎಂದು ಗೌರಿಗದ್ದೆಯ ಅವಧೂತ ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ.

Advertisement

ಭಾನುವಾರ ಕಡೂರು ತಾಲೂಕು ಯಗಟಿಯಲ್ಲಿ ನಡೆದ ಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಣ್ಣಾಮಲೈ ಅವರನ್ನು ಚಿಕ್ಕಮಗಳೂರಿನಲ್ಲಿ ಭೇಟಿಯಾಗಿದ್ದ ವೇಳೆ ತಾವು ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿ ಆಗುತ್ತೀರಾ. ತಮಿಳುನಾಡಿನಲ್ಲಿ ಧರ್ಮವು ಬೆಳೆಯುತ್ತದೆ. ತಿರುವಣ್ಣಾಮಲೈ ದೇವಸ್ಥಾನಕ್ಕೆ ಸದಾ ಭೇಟಿ ಕೊಡುತ್ತಿರಿ ಎಂದು ಅವರಿಗೆ ಹೇಳಿದ್ದೆ. ಕೆ.ಅಣ್ಣಾಮಲೈ ಅವರನ್ನು ಭೇಟಿಯಾದಗಲೆಲ್ಲ ಎರಡು ಸೇಬು ಹಣ್ಣುಗಳನ್ನು ನೀಡಿ ಅವರಿಗೆ ಆಶೀರ್ವದಿಸಿದ್ದೇನೆ.

ಖಾಕಿ ತೊರೆದಿರುವ ಅವರು ಖಾದಿ ತೊಟ್ಟಿದ್ದಾರೆ. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಮುಂದೊಂದು ದಿನ ತಮಿಳುನಾಡಿನ ಸಿಎಂ ಆಗುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next