Advertisement

ಮದುವೆಯಾದ ನಾಲ್ಕೇ ತಿಂಗಳಲ್ಲಿ ಮನೆ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾದ ಮಾನಸಿಕ ಅಸ್ವಸ್ಥ

09:03 PM Jun 23, 2022 | Team Udayavani |

ಚೇಳೂರು : ಮಾನಸಿಕ ಅಸ್ವಸ್ಥ ಮನಸ್ಸಿನ ವ್ಯಕ್ತಿ ನೇಣು ಹಾಕಿಕೊಂಡು ಮೃತ ಪಟ್ಟಿರುವ ಘಟನೆ ಹೋಬಳಿಯ ಅಂತಃಪುರದಲ್ಲಿ ನೆಡೆದಿದೆ.

Advertisement

ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಮೃತ ಮಂಜುನಾಥ್ (29 ವರ್ಷ) ತಾನು ವಾಸಿಸುವ ಮನೆಯ ಬಾಗಿಲು ಹಾಕಿಕೊಂಡು ಮನೆಗೆ ಸಿಮೆಂಟ್ ಸೀಟ್ ಹಾಕಿರುವ ಜಂತೆಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದಾರೆ.

ಮೃತನ ಪತ್ನಿ ಅನಿತಾಲಕ್ಷ್ಮಿ ಗಂಡ ಬಾಗಿಲು ಹಾಕಿಕೊಂಡು ಸುಮಾರು ಸಮಯವಾದರೂ ತೆಗೆದುಕೊಳ್ಳದೆ ಅನುಮಾನ ಬಂದು ಬಾಗಿಲು ತೆಗೆದು ನೋಡಿದಾಗ ಪತಿ ನೇಣು ಹಾಕಿಕೊಂಡು ಕಂಡುಬಂದಿದೆ ಇದನ್ನು ನೋಡಿ ಗಾಬರಿಗೊಂಡ ಪತ್ನಿ ಅಕ್ಕಪಕ್ಕದವರ ಸಹಾಯದಿಂದ ಚೇಳೂರು ಆಸ್ಪತ್ರೆ ಕರೆದು ಕೊಂಡು ಬರುವಷ್ಟರಲ್ಲಿ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

4 ತಿಂಗಳ ಹಿಂದೆಯಷ್ಟೇ ಇವರ ವಿವಾಹವಾಗಿತ್ತು. ಸ್ಥಳಕ್ಕೆ ಪಿಎಸ್ಐ ವಿಜಯಕುಮಾರಿ ಮತ್ತು ಸಿಬ್ಬಂಧಿಗಳು ಭೇಟಿ ನೀಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಅಗ್ನಿಪಥ: ತಾಲೂಕು ಮಟ್ಟದಲ್ಲಿ ಪ್ರತಿಭಟನೆಗೆ ಕಾಂಗ್ರೆಸ್‌ ತೀರ್ಮಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next