Advertisement

ದಸರಾ ಮೆರವಣಿಗೆ ಮೇಲೆ ಹರಿದ ಕಾರು: 1 ಸಾವು , 20 ಜನರಿಗೆ ಗಾಯ

07:54 PM Oct 15, 2021 | Team Udayavani |

ಜಶ್‌ಪುರ : ಛತ್ತೀಸ್ ಗಢದ ಜಶ್‌ಪುರ ಜಿಲ್ಲೆಯ ಪಠಾಲ್‌ಗಾಂವ್‌ನಲ್ಲಿ ಶುಕ್ರವಾರ ನಡೆಯುತ್ತಿದ್ದ ದಸರಾ ಮೆರವಣಿಗೆ ಮೇಲೆ ವೇಗವಾಗಿ ಸಾಗಿ ಬಂದ ಕಾರು  ಹರಿದು  20 ಜನರನ್ನು ನಜ್ಜುಗುಜ್ಜಾಗಿಸಿದೆ, ಓರ್ವ ಗಾಯಾಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

Advertisement

ಜನರು ದಸರಾ ಹಬ್ಬದ ಮೆರವಣಿಗೆ ನೋಡಲು ಹೋದಾಗ ಈ ಘಟನೆ ಸಂಭವಿಸಿದೆ. ಘಟನೆಯ ನಂತರ, ಗಾಯಗೊಂಡ ಎಲ್ಲರನ್ನು ಸ್ಥಳೀಯರ ಸಹಾಯದಿಂದ ಪಥಲ್‌ಗಾಂವ್ ನಾಗರಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಇಬ್ಬರು ಗಂಭೀರ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಜಶ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ, ರಸ್ತೆ ಅಪಘಾತದ ಘಟನೆಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಇಬ್ಬರೂ ಆರೋಪಿಗಳು ಮಧ್ಯಪ್ರದೇಶದ ನಿವಾಸಿಗಲಾಗಿದ್ದು, ಬಬ್ಲು (21)ಮತ್ತು ಶಿಶುಪಾಲ್ ಸಾಹು (26 ) ಎಂದು ತಿಳಿದು ಬಂದಿದೆ. ಕಾನೂನಿನ ಪ್ರಕಾರ ಇಬ್ಬರೂ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಅವಘಡದ ಬಗ್ಗೆ ತನಿಖೆಗೆ ಸೂಚನೆಗಳನ್ನು ನೀಡಿದ್ದಾರೆ. ಘಟನೆ ಹೃದಯವಿದ್ರಾವಕ ಎಂದು ವಿವರಿಸಿದ ಅವರು, ಶೀಘ್ರ ಕ್ರಮ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಾಥಮಿಕ ಕ್ರಮ ಕೈಗೊಳ್ಳಲಾಗಿದೆ. ಯಾರನ್ನೂ ಬಿಡುವುದಿಲ್ಲ, ಎಲ್ಲರಿಗೂ ನ್ಯಾಯ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next