Advertisement

AAP: ಸರ್ಕಾರಿ ಬಂಗಲೆಯಲ್ಲಿ ಮುಂದುವರಿಯಲು ಛಡ್ಡಗೆ ಅವಕಾಶ

09:19 PM Oct 17, 2023 | Team Udayavani |

ನವದೆಹಲಿ: ಆಪ್‌ ಸಂಸದ ರಾಘವ್‌ ಛಡ್ಡ ಅವರು ತಮ್ಮ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಜ್ಯಸಭಾ ಕಾರ್ಯದರ್ಶಿ ಹೊರಡಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಈ ಮೂಲಕ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ರಾಜ್ಯಸಭಾ ಕಾರ್ಯದರ್ಶಿಗಳ ಆದೇಶ ಪ್ರಶ್ನಿಸಿ ಛಡ್ಡ ನ್ಯಾಯಾಲಯದ ಮೊರೆ ಹೋಗಿದ್ದರು. “ಇದು ಕೇವಲ ಮನೆ ಅಥವಾ ಅಂಗಡಿಗಾಗಿ ನಡೆಸುತ್ತಿರುವ ಹೋರಾಟವಲ್ಲ. ಬದಲಾಗಿ ಸಂವಿಧಾನವನ್ನು ರಕ್ಷಿಸಲು ಮಾಡುತ್ತಿರುವ ಹೋರಾಟ. ರಾಜಕೀಯ ದ್ವೇಷದಿಂದ ಬಂಗಲೆ ಹಂಚಿಕೆಯನ್ನು ರದ್ದುಪಡಿಸಲಾಗಿದೆ” ಎಂದು ಛಡ್ಡ ಟ್ವೀಟ್‌(ಎಕ್ಸ್‌) ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next