Advertisement

ಕಬ್ಬಿನ ಗದ್ದೆಯಲ್ಲಿ ಚಿರತೆ ಕಳೆಬರ ಪತ್ತೆ

03:38 PM Feb 09, 2021 | Team Udayavani |

ಮಂಡ್ಯ: ತಾಲೂಕಿನ ಮಾಚಹಳ್ಳಿ ಗ್ರಾಮದ ರಾಜಪ್ಪ ಎಂಬುವವರ ಕಬ್ಬಿನ ಗದ್ದೆಯಲ್ಲಿ ಚಿರತೆ  ಮರಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಸುಮಾರು 6 ತಿಂಗಳಿನ ಮೃತ ಚಿರತೆ ಮರಿಯ ಕುತ್ತಿಗೆ ಬಾಗದಲ್ಲಿ ಗಾಯಗಳಾಗಿದ್ದು, ಮರಿಗಳು  ಒಂದಕ್ಕೊಂದು ಕಚ್ಚಾಡಿಕೊಂಡು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಚಿರತೆಯ ಕಳೆಬರ ಪತ್ತೆಯ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪಶು ಇಲಾಖೆ ವೈದ್ಯರು ಕಳೆಬರ ಪರೀಕ್ಷೆ ನಡೆಸಿ ಶವಪಂಚನಾಮೆ ಬಳಿಕ ಅಂತ್ಯಸಂಸ್ಕಾರ ನಡೆಸಿದರು.

ಇದನ್ನೂ ಓದಿ :ಅತ್ಯಾಚಾರ, ಕೊಲೆ ಪ್ರಕರಣ: ಬಂಧನ  

ಕಳೆದ ಹಲವು ದಿನಗಳಿಂದ ನಾಲ್ಕು ಚಿರತೆ ಮರಿಗಳು ಸಂಚರಿಸುತ್ತಿದ್ದವು. ಇದರ ಬಗ್ಗೆ ಅರಣ್ಯಾಧಿಕಾರಿ ಗಳಿಗೆ ದೂರು ನೀಡಲಾಗಿದೆ. ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯಲು ಬೋನ್‌ ಇಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ರೈತ ರಾಜಪ್ಪ ಹೇಳಿದರು. ಉಪವಲಯ ಅರಣ್ಯಾಧಿಕಾರಿ ವೆಂಕಟೇಶ್‌, ಶೈಲೇಶ್‌, ಪಾಪಣ್ಣ, ರಾಮಕೃಷ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next