Advertisement

ಮಳೆ ನೀರು ಇಂಗಿಸಲು ಚೆಕ್‌ಡ್ಯಾಂ ಅಗತ್ಯ

03:50 PM May 10, 2020 | Suhan S |

ಕುಕನೂರು: ಮಳೆ ನೀರು ಇಂಗಿಸುವಲ್ಲಿ ಸಹಕಾರಿಯಾಗುವ ಚೆಕ್‌ಡ್ಯಾಂಗಳು ರೈತರಿಗೆ ಪರೋಕ್ಷವಾಗಿ ಸಹಕಾರಿಯಾಗಿವೆ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.ತಾಲೂಕಿನ ಕುಕನೂರು ಹೋಬಳಿಯ ಬಳಗೇರ, ಬೂದಗುಂಪಾ ಹಾಗೂ ಚಿಕ್ಕಬಿಡನಾಳ ಗ್ರಾಮಗಳ ಹಳ್ಳಗಳಿಗೆ ತಲಾ 2 ಕೋಟಿ ವೆಚ್ಚದ ಚೆಕ್‌ಡ್ಯಾಂ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

Advertisement

ಚೆಕ್‌ಡ್ಯಾಂ ನಿರ್ಮಾಣ ಮಾಡುತ್ತಿರುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಕುಕನೂರು, ಯಲಬುರ್ಗಾ ತಾಲೂಕುಗಳು ಒಣ ಬೇಸಾಯ ಭೂಮಿಯಾಗಿದ್ದು, ಮಳೆಗಾಲ ಇರುವುದರಿಂದ ಮುಂದಿನ ದಿನಮಾನಗಳಲ್ಲಿ ಚೆಕ್‌ಡ್ಯಾಂಗಳಿಂದ ಉಪಯೋಗವಾಗುವುದಕ್ಕಾಗಿ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಕೃಷ್ಣಾ ಬಿ ಸ್ಕೀಂ ಯೋಜನೆಗೆ 1726 ಕೊಟಿ ರೂ. ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗಳಿಗೆ ನೀರು ಬಿಡುವ ಕಾರ್ಯ ಮಾಡಲಾಗುವುದು ಎಂದರು.

ಸಂದರ್ಭದಲ್ಲಿ ತಾಪಂ ಅಧ್ಯಕ್ಷೇ ಲಕ್ಷ್ಮೀ ದ್ಯಾಮಣ್ಣ ಗೌಡ್ರು, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ರಾಮಣ್ಣ ಹೊಸಮನಿ, ಪಪಂ ಸದಸ್ಯ ಶಂಭು ಜೋಳದ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ, ರತನ್‌ ದೇಸಾಯಿ, ಕೊಟ್ರಪ್ಪ ಮುತ್ತಾಳ ಹಾಗೂ ಪಿಎಸ್‌ಐ ಎನ್‌. ವೆಂಕಟೇಶ ಹಾಗೂ ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next