Advertisement

ಬಸ್ಸು-ಕಾರು ಢಿಕ್ಕಿ : ಲೆಕ್ಕಪರಿಶೋಧಕ ದುರ್ಮರಣ

07:13 PM Mar 30, 2018 | Team Udayavani |

ಮೂಡಬಿದಿರೆ: ಇಲ್ಲಿಗೆ ಸಮೀಪದ ಹಂಡೇಲು ಎಂಬಲ್ಲಿ ಖಾಸಗಿ ಬಸ್ಸು ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರನ್ನು ಚಲಾಯಿಸುತ್ತಿದ್ದ ಪ್ರಕಾಶ್‌ ಹೆಗ್ಡೆ ಎಂಬವರು ಸಾವನ್ನಪ್ಪಿದ್ದಾರೆ. ಪ್ರಕಾಶ್‌ ಅವರು ಕಾರ್ಕಳದಲ್ಲಿ ಲೆಕ್ಕಪರಿಶೋಧಕ ವೃತ್ತಿಯನ್ನು ನಿರ್ವಹಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

Advertisement

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪ್ರಕಾಶ್‌ ಹೆಗ್ಡೆ ಅವರ ಪತ್ನಿ ಡಾ. ಆಶಾ ಹೆಗ್ಡೆ ಅವರು ಮಕ್ಕಳ ತಜ್ಞೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next