Advertisement

ಚಾರ್ಮಾಡಿ: 2 ದಿನ ಬಂದ್‌, ಮಂಗಳವಾರ ಸಂಜೆಯಿಂದಲೇ ಕಾಮಗಾರಿಗೆ ಚಾಲನೆ

08:52 AM Jun 13, 2018 | Harsha Rao |

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದ್ದರೂ ನಿರ್ವಹಣ ಕಾಮಗಾರಿ ನಡೆಸಲು ಬುಧವಾರ, ಗುರುವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

Advertisement

ಸೋಮವಾರ ಸಂಜೆ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾತ್ರಿ ಮತ್ತೆ ಭಾರೀ ಪ್ರಮಾಣದಲ್ಲಿ ಒಟ್ಟು 9 ಕಡೆ ಕುಸಿದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮಂಗಳವಾರ ಸಂಜೆ ವೇಳೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಿ ಬಳಿಕ ಬಂದ್‌ ಮಾಡಲಾಯಿತು.

ಕಗ್ಗತ್ತಲ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆ, ಆಗಾಗ ಸಿಗುತ್ತಿರುವ ಮರ ಬಿದ್ದ, ಗುಡ್ಡ ಕುಸಿತದ ಸುದ್ದಿ. ವಾಹನಗಳಲ್ಲೇ ಬಾಕಿಯಾದ ಜನರಿಗೆ ಮೊಬೈಲ್‌ ಮೂಲಕ ಸಂಪರ್ಕಿಸಲು ನೆಟ್‌ವರ್ಕ್‌ ಸಮಸ್ಯೆ, ಹಸಿವು ನೀಗಿಸಲು ಆಹಾರವೂ ಇಲ್ಲದಂತಾಗಿತ್ತು. ಒಟ್ಟು 18 ಗಂಟೆಗಳ ಕಾಲ ಚಾರ್ಮಾಡಿ ಘಾಟ್‌ನಲ್ಲಿ ಕಳೆಯುವಂತಾಯಿತು. ಬೆಳಗ್ಗೆ ಸುಮಾರು 5 ಗಂಟೆಗೆ ಕುಸಿದ ಗುಡ್ಡದಲ್ಲಿದ್ದ ಮರಗಳನ್ನು ಕಡಿದು, 4 ಜೆಸಿಬಿಗಳಿಂದ ಕಾರ್ಯಾಚರಣೆ ನಡೆಸಲಾಯಿತು. ದೊಡ್ಡ ಬಂಡೆ ಕುಸಿದಿದ್ದು, ತೆರವು ಮಾಡಲಾಗಿದೆ. ಸುಮಾರು 1.30ರ ವೇಳೆಗೆ ರಸ್ತೆ ಬಳಕೆಗೆ ಲಭ್ಯವಾದರೂ ಮತ್ತೆ ಸಣ್ಣ ಮಟ್ಟಿನ ಕುಸಿತವಾಯಿತು. ಬಳಿಕ ಜೆಸಿಬಿ ಬಳಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next