Advertisement

ಚಾರ್‌ಧಾಮ್‌ ಯಾತ್ರೆ ಶುರು: ಆರು ತಿಂಗಳ ಬಳಿಕ ತೆರೆದ ಗಂಗೋತ್ರಿ, ಯಮುನೋತ್ರಿ ಬಾಗಿಲುಗಳು

10:40 PM Apr 22, 2023 | Team Udayavani |

ಡೆಹ್ರಾಡೂನ್‌: ಚಾರ್‌ಧಾಮ್‌ ಯಾತ್ರೆಯು ಶನಿವಾರ ಆರಂಭವಾಗಿದೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳನ್ನು ಶನಿವಾರ ತೆರೆಯಲಾಯಿತು. ಗಂಗೋತ್ರಿ ದೇಗುಲವನ್ನು ಮಧ್ಯಾಹ್ನ 12.35ಕ್ಕೆ ಮತ್ತು ಯಮುನೋತ್ರಿ ದೇಗುಲವನ್ನು ಮಧ್ಯಾಹ್ನ 12.41ಕ್ಕೆ ತೆರೆಯಲಾಯಿತು ಎಂದು ದೇಗುಲ ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಚಳಿಗಾಲದ ಆರು ತಿಂಗಳು ಮುಚ್ಚಲಾಗಿದ್ದ ಗಂಗೋತ್ರಿ ದೇಗುಲವನ್ನು ವಿಧ್ಯುಕ್ತವಾಗಿ ತೆರೆಯುವ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಪೂಜೆ ಸಲ್ಲಿಸಿದರು. ಯುಮುನಾ ದೇವಿಯ ಚಳಿಗಾಲದ ವಾಸಸ್ಥಳ ಖರ್ಸಾಲಿಯಲ್ಲಿ ಭಕ್ತರ ಮೇಲೆ ಹೆಲಿಕಾಪ್ಟರ್‌ ಮೂಲಕ ಗುಲಾಬಿ ದಳಗಳ ವೃಷ್ಟಿ ಮಾಡಲಾಯಿತು. ಯುಮುನಾ ದೇವಿಗೆ ಧಾಮಿ ಅವರು ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಯುಮುನಾ ದೇವಿ ಮೂರ್ತಿಯನ್ನು ಕೂರಿಸಿ, ಅದನ್ನು ಹೊತ್ತ ಪುರೋಹಿತರು ಮೆರವಣಿಗೆ ಮೂಲಕ ಯಮುನೋತ್ರಿಗೆ ಸಾಗಿದರು. ಮುಂದಿನ ಆರು ತಿಂಗಳು ಇಲ್ಲಿ ಯಮುನಾ ದೇವಿ ನೆಲೆಸಲಿದ್ದಾಳೆನ್ನುವುದು ಭಕ್ತರ ನಂಬಿಕೆ.

ಇದೇ ವೇಳೆ ಭಕ್ತರನ್ನು ಸ್ವಾಗತಿಸಿದ ಸಿಎಂ ಧಾಮಿ ಮಾತನಾಡಿ, “ಯಾತ್ರಿಕರು ಸುಗಮವಾಗಿ, ಯಾವುದೇ ತೊಂದರೆ ಇಲ್ಲದೇ ಯಾತ್ರೆ ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 16 ಲಕ್ಷಕ್ಕೂ ಅಧಿಕ ಯಾತ್ರಿಕರು ಚಾರ್‌ಧಾಮ್‌ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ಇನ್ನು ಏರಿಕೆ ಆಗುತ್ತಿದೆ,’ ಎಂದು ಹೇಳಿದರು. ಕೇದಾರನಾಥ ದೇಗುಲವು ಏ.25ರಂದು ಮತ್ತು ಬದರಿನಾಥ ದೇಗುಲವು ಏ.27ರಂದು ತೆರೆಯಲಾಗುತ್ತದೆ.

ಇದನ್ನೂ ಓದಿ: ವಿಮಾನದಲ್ಲಿ ಪುರುಷನಿಗೆ ಕಿಸ್ ಕೊಟ್ಟು ಹಲ್ಲೆ ಮಾಡಿದ ಪಾನಮತ್ತ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next