Advertisement

ಜೀ ವಾಹಿನಿಯಲ್ಲಿ ಇಂದು “ಸರಿಗಮಪ ಸೀಸನ್‌ -12′ಫಿನಾಲೆ

11:43 AM Feb 18, 2017 | |

ಜೀ ಕನ್ನಡ ವಾಹಿನಿಯ “ಸರಿಗಮಪ ಸೀಸನ್‌-12′ ಕಾರ್ಯಕ್ರಮ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಇತ್ತೀಚೆಗೆ ಹಾಸನದಲ್ಲಿ ಬೃಹತ್‌ ಜನಸ್ತೋಮದ ಮಧ್ಯೆ ಅದ್ಧೂರಿಯಾಗಿ ಫಿನಾಲೆ ಕಾರ್ಯಕ್ರಮ ನಡೆದಿದೆ.  6 ಮಕ್ಕಳು ಫಿನಾಲೆಗೆ ಆಯ್ಕೆಯಾಗಿದ್ದು, ಅನ್ವಿತಾ, ವೇಣುಗೋಪಾಲ್‌, ಆಸ್ತಾ, ದರ್ಶನ್‌, ವೈಷ್ಣವಿ, ಶ್ರೀಕರ್‌  ವೇದಿಕೆ ಏರಿ ಹಾಡಿ ರಂಜಿಸಿದ್ದಾರೆ.

Advertisement

ಮಹಾಗುರುಗಳಾಗಿ ಆಗಮಿಸಿದ ಹಂಸಲೇಖ ಮಕ್ಕಳ ಪ್ರತಿಭೆಯನ್ನು ಕೊಂಡಾಡಿ ಮೆಚ್ಚಿಕೊಂಡು ಹರಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಡ್ರಾಮಾ ಜ್ಯೂನಿಯರ್ಸ್‌ ಮತ್ತು ಕಾಮಿಡಿ ಕಿಲಾಡಿಗಳು ಜೊತೆಯಾಗಿ ಸ್ಕಿಟ್‌ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರಲಿರುವ ಹೊಸ ಕಥಾಹಂದರವುಳ್ಳ “ಜೋಡಿಹಕ್ಕಿ’ ಧಾರಾವಾಹಿಯ ನಾಯಕ ನಾಯಕಿಯಿಂದ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ಫಿನಾಲೆಯ ಮೊದಲನೇ ಸುತ್ತಿನಲ್ಲಿ 6 ಮಕ್ಕಳು ಹಾಡಿದ್ದು, ಎರಡನೇ ಸುತ್ತಿಗೆ ಆಯ್ಕೆಯಾದ 3 ಮಕ್ಕಳು ಹಾಡಿದ್ದಾರೆ. “ಸರಿಗಮಪ ಸೀಸನ್‌ 12′ ರ ವಿನ್ನರ್‌ ಯಾರು ಎಂಬುದು ಫೆಬ್ರವರಿ 18 ಮತ್ತು 19 ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next