Advertisement

Channapatna by-election; ಸ್ಪರ್ಧೆ ಖಚಿತ ಎಂದ ಸಿಪಿ ಯೋಗೇಶ್ವರ್‌

12:43 AM Oct 13, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‌-ಬಿಜೆಪಿ ನಡುವೆ ಎದುರಾಗಿರುವ ಟಿಕೆಟ್‌ ಫೈಟ್‌ ತೀವ್ರವಾಗಿರುವ ಬೆನ್ನಲ್ಲೇ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್‌ ಶುಕ್ರವಾರ ತಮ್ಮ ಬೆಂಬಲಿಗರ ಸಭೆ ಮಾಡಿ, ಮುಂದಿನ ರಾಜಕೀಯ ನಡೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

Advertisement

ಚನ್ನಪಟ್ಟಣದ ತಮ್ಮ ನಿವಾಸದಲ್ಲಿ ಆಪ್ತ ಮುಖಂಡರು ಮತ್ತು ಹಿತೈಷಿಗಳ ಸಭೆ ನಡೆಸಿದ ಅವರು, ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು. ಕ್ಷೇತ್ರವನ್ನು ಈ ಬಾರಿ ಬಿಟ್ಟುಕೊಡುವ ಮಾತೇ ಇಲ್ಲ, ಇದಕ್ಕಾಗಿ ಮುಂದಿನ ದಿನಗಳಲ್ಲಿ ಅನುಸರಿಸ ಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಂಬಂಧ ಕೊನೆಕ್ಷಣದವರೆಗೆ ಪ್ರಯತ್ನ ನಡೆಸುತ್ತೇನೆ. ಬಿಜೆಪಿ ರಾಷ್ಟ್ರ ನಾಯಕರಿಗೆ ವಸ್ತು ಸ್ಥಿತಿ ಮನವರಿಕೆ ಮಾಡಿಕೊಟ್ಟು, ಕುಮಾರಸ್ವಾಮಿ ಮನವೊಲಿಸಿ ಟಿಕೆಟ್‌ ಕೊಡಿಸುವಂತೆ ಕೇಳುತ್ತೇನೆ. ಈಗಾಗಲೇ ರಾಜ್ಯ ಬಿಜೆಪಿ ಆಂತರಿಕ ಸಮೀಕ್ಷೆಯನ್ನು ಕಳುಹಿಸಿದ್ದು ಚನ್ನಪಟ್ಟಣದಲ್ಲಿ ನನ್ನ ಪರ ಜನಮತವಿದೆ ಎಂಬ ಅಂಶ ವರದಿಯಲ್ಲಿದೆ ಎಂದು ಯೋಗೇಶ್ವರ್‌ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾಗಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next