Advertisement

ಚನ್ನಗಿರಿ: ಲಕ್ಷಾಂತರ ರೂ. ಅಡಿಕೆ ಕಳ್ಳತನ; ತಲೆಮರಿಸಿಕೊಂಡಿದ್ದ ಮೂವರ ಬಂಧನ

10:50 PM Jul 26, 2023 | Team Udayavani |

ಚನ್ನಗಿರಿ: ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳ್ಳತನ ಮಾಡಿ ತಲೆಮರಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಕಾರ್ತಿಕ್ ಹೆಚ್.ಎಸ್(28) ಶಿವಮೊಗ್ಗ ಮೂಲದ ಶೆಟ್ಟಿಹಳ್ಳಿ ಗ್ರಾಮದ ನಿವಾಸಿ, ಜಾವೀದ್ ಆಲಿ(28)ತಾಲೂಕಿನ ಕರೇಕಟ್ಟೆ ಗ್ರಾಮದ ನಿವಾಸಿ, ಅಮೀರ್ ಜಾನ್(24) ಬಂಧಿತ ಆರೋಪಿಗಳು.

Advertisement

ನಲ್ಲೂರು ಗ್ರಾಮದಲ್ಲಿ ಮೊಹಮ್ಮದ್ ಜಾವೀದ್ ಎಂಬುವವರು ತಮ್ಮ ಖೇಣಿ ಮನೆಯಲ್ಲಿ 41ಅಡಿಕೆ ಚೀಲಗಳನ್ನು ಸಂಗ್ರಹಿಸಿಟ್ಟಿದ್ದರು. ಕೆಲ ದಿನಗಳ ಹಿಂದೆ ರಾತ್ರೋರಾತ್ರಿ ಅಡಿಕೆ ಚೀಲಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಪೋಲಿಸರು ಕಳ್ಳರನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಅರೋಪಿಗಳು ಕಳ್ಳತನ ಮಾಡಿದ 41 ಚೀಲ ಅಡಿಕೆಯನ್ನು ಮರಾಟ ಮಾಡಿದ್ದ6 ಲಕ್ಷ ತೊಂಬತ್ತು ಸಾವಿರ ರೂ.ಹಣವನ್ನು ಮತ್ತು ಕಳ್ಳತನಕ್ಕೆ ಬಳಸಿದ್ದವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೋಲಿಸ್ ಅಧೀಕ್ಷ ಆರ್.ಬಿ. ಬಸರಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next