Advertisement

ನಡವಳಿಕೆ ಬದಲಾಯಿಸಿಕೊಳ್ಳುತ್ತೇನೆ: ಹುಚ್ಚ ವೆಂಕಟ್‌

08:31 PM Jan 11, 2022 | Team Udayavani |

ಬೆಂಗಳೂರು: ನನ್ನ ನಡುವಳಿಕೆಗಳನ್ನು ಬದಲಾಯಿಸಿಕೊಂಡು ಸಮಾಜದ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕೆಂಬ ಆಸೆ ಇದೆ. ಮುಂಬರುವ ದಿನಗಳಲ್ಲಿ ಹುಚ್ಚ ವೆಂಕಟ್‌ ಬ್ಯಾನರ್‌ ಅಡಿ ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಬೇಕೆಂಬ ಗುರಿ ಇದೆ ಎಂದು ನಟ ನಿರ್ದೇಶಕ ನಿರ್ಮಾಪಕ ಹುಚ್ಚವೆಂಕಟ್‌ ತಿಳಿಸಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗೆದ್ದಾಗ ಸಂತೋಷಪಟ್ಟು, ಬಿದ್ದಾಗ ಕೈಯೆತ್ತಿ ನಿಲ್ಲಿಸಿದ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಮಾಧ್ಯಮದ ಮುಂದೆ ಬಂದಿದ್ದೇನೆ. ಹಿಂದೆ ಆದ ಕೆಲವು ಲೋಪಗಳನ್ನು ಸರಿಪಡಿಸಿ ಮುಂಬರುವ ದಿನಗಳಲ್ಲಿ ಹೊಸ ಆಲೋಚನೆಗಳೊಂದಿಗೆ ಮುನ್ನಡೆಯಲು ನಿರ್ಧರಿಸಿದ್ದೇನೆ.

ಇದನ್ನೂ ಓದಿ:ದಾವಣಗೆರೆ : ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 46 ಮಂದಿಯಲ್ಲಿ ಸೋಂಕು ದೃಢ

ಸೌಮ್ಯ ಸ್ವಭಾವವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಪಡುವೆ. ಈ ಕಾರಣದಿಂದಾಗಿ ಸುಮಾರು ಚಿತ್ರಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಪಾತ್ರಗಳು ಸಿಗುತ್ತಿದ್ದು ನನ್ನ ಜೀವನದಲ್ಲಿ ಉತ್ತಮ ಬೆಳವಣಿಗೆಗಳು ಆಗುತ್ತಿವೆ. ಇತ್ತೀಚಿಗೆ ಅಂತಿಮ ಸತ್ಯ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next