Advertisement

ರೈತರಿಗೆ ಗಾಯದ ಮೇಲೆ ಬರೆ: ರೈತಗಿಲ್ಲ ಶೂನ್ಯ ಬಡ್ಡಿ ಸಾಲ, ಈಗ ಕುಟುಂಬಕ್ಕೆ ಮಾತ್ರ

10:30 AM May 19, 2020 | keerthan |

ಗಂಗಾವತಿ: ರಾಜ್ಯದ ಎಪಿಎಂಸಿ ಖಾಸಗೀಕರಣ ನಂತರ ರಾಜ್ಯ ಸರಕಾರ ಇದೀಗ ರಾಜ್ಯದ ಸಹಕಾರಿ ಬ್ಯಾಂಕುಗಳು ಮತ್ತು ಸಂಸ್ಥೆಗಳ ಮೂಲಕ ರೈತರಿಗೆ ಇದುವರೆಗೂ ವಿತರಿಸುತ್ತಿದ್ದ ಶೂನ್ಯ ಬಡ್ಡಿ ದರದ ಸಾಲದ ನಿಯಮಗಳನ್ನು ಬದಲಾಯಿಸಿದ್ದು ಪ್ರತಿ ರೈತರ ಬದಲಿಗೆ ಒಂದು ಕುಟುಂಬಕ್ಕೆ 3 ಲಕ್ಷ ರೂ.ಗಳ ಶೂನ್ಯ ಬಡ್ಡಿ ಸಾಲ ವಿತರಿಸಲು ನಿಯಮ ಬದಲಿ ಮಾಡಿ ಸಹಕಾರ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಕಾಂಗ್ರೆಸ್ ಸರಕಾರ ಮತ್ತು‌ ಸಂಮಿಶ್ರ ಸರಕಾರದ ಬಜೆಟ್ ನಲ್ಲಿ ಪ್ರತಿ ರೈತ ತನ್ನ ಭೂಮಿ ಅಭಿವೃದ್ಧಿ ಬೆಳೆ ಸಾಲ ನೀಡುವಾಗ ಪ್ರತಿ ರೈತ ತನ್ನ ಭೂಮಿ ಮಾಟಗೇಜ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಅರ್ಹತೆ ಯಂತೆ ಸಾಲ ಪಡೆಯಬಹುದಾಗಿತ್ತು.ಇದೀಗ ಸರಕಾರ ವೈಯಕ್ತಿಕ ಸಾಲ ನೀಡದೇ ಒಂದು ರೈತ ಕುಟುಂಬಕ್ಕೆ 3 ಲಕ್ಷ ರೂ.ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಸೂಚನೆ ನೀಡಿ ಸುತ್ತೊಲೆ ಹೊರಡಿಸಿದೆ.

ಈ ಹಿಂದೆ ಒಂದೇ ಕುಟುಂಬದಲ್ಲಿರೂ ಬೇರೆ ಬೇರೆ ಪಹಣಿ ದಾಖಲೆ ನೀಡಿ ಪ್ರತಿಯೊಬ್ಬ ರೈತ ಶೂನ್ಯ ಬಡ್ಡಿ ದರದಲ್ಲಿ 3ಲಕ್ಷ ರೂ.ವರೆಗೆ ಸಾಲ ಪಡೆಯಲು ಅವಕಾಶ ಇತ್ತು. ಸರಕಾರದ ಹೊಸ ಸುತ್ತೋಲೆಯಿಂದ ರೈತರಿಗೆ ತೊಂದರೆ ಆಗುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಸುತ್ತೋಲೆ ವಾಪಸ್ ಪಡೆಯಲು ಒತ್ತಾಯ: ಪ್ರತಿಯೊಬ್ಬ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಸಿಗುತ್ತಿತ್ತು ಮೀಟರ್ ಬಡ್ಡಿ ದಂಧೆಕೋರರ ಒತ್ತಡಕ್ಕೆ ಮಣಿದು ಉಚಿತವಾಗಿ ಸಾಲ ವಿತರಣೆ ಯೋಜನೆಗೆ ತಿಲಾಂಜಲಿ ಇಡಲಾಗಿದೆ. ಪ್ರತಿಯೊಬ್ಬ ರೈತರಿಗೆ ಬಡ್ಡಿ ಇಲ್ಲದೇ ಸಾಲ ವಿತರಣೆ ಯೋಜನೆ ನಿಲ್ಲಿಸಲು ಷಡ್ಯಂತ್ರ ನಡೆಸಲಾಗುತ್ತಿದೆ. ಕುಟುಂಬಕ್ಕೆ ಮಾತ್ರ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ವಿತರಣೆ ಸರಿಯಲ್ಲ ಸರಕಾರ ಸುತ್ತೋಲೆ ವಾಪಸ್ ಪಡೆಯಬೇಕೆಂದು ಅಖಿಲ ಭಾರತ ಕೃಷಿಕ ಮಹಾಸಭಾ ರಾಜ್ಯ ಮುಖಂಡ ಜೆ.ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next