Advertisement
ಇದೇ ಮೊದಲ ಸಲ ಭಾರತದ ನೆಲದಲ್ಲಿ ಟೆಸ್ಟ್ ಆಡಿದ ಬಾಂಗ್ಲಾದೇಶ ಸೋಮವಾರ 208 ರನ್ನುಗಳ ದೊಡ್ಡ ಸೋಲಿಗೆ ತುತ್ತಾಗಿತ್ತು. ಈ ವಿಜಯೀ ತಂಡದ ಮೇಲೆ ಆಯ್ಕೆಗಾರರು ವಿಶ್ವಾಸವಿರಿಸಿದರು. ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ಸಮಿತಿ ಮುಂಬಯಿಯಲ್ಲಿ ಸಭೆ ಸೇರಿ ಯಾವುದೇ ಗೊಂದಲವಿಲ್ಲದೆ ಆಯ್ಕೆ ಪ್ರಕ್ರಿಯೆಯನ್ನು ಅಂತಿಮ ಗೊಳಿಸಿತು.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಕ್ಕೆಂದು ಲೆಗ್ಸ್ಪಿನ್ನರ್ ಅಮಿತ್ ಮಿಶ್ರಾ ಮೊದಲು ಆಯ್ಕೆಯಾಗಿ ದ್ದರು. ಆದರೆ ಅವರು ಗಾಯಾಳಾಗಿ ಹೊರಗೆ ಉಳಿಯಬೇಕಾದ್ದರಿಂದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಆಯ್ಕೆ ಮಾಡ ಲಾಗಿತ್ತು. ಮಿಶ್ರಾ ಇನ್ನೂ ಚೇತರಿಸದ ಕಾರಣ ಯಾದವ್ ಅವರೇ ತಂಡದಲ್ಲಿ ಮುಂದುವರಿದಿದ್ದಾರೆ. ಹಾಗೆಯೇ ಬ್ಯಾಟ್ಸ್ಮನ್ ರೋಹಿತ್ ಶರ್ಮ, ಬೌಲರ್ ಮೊಹಮ್ಮದ್ ಶಮಿ ಕೂಡ ಪೂರ್ತಿ ಗುಣಮುಖರಾಗದ ಕಾರಣ ಇವರನ್ನು ಆಯ್ಕೆಗೆ ಪರಿಗಣಿಸಿಲ್ಲ.
Related Articles
Advertisement
ಬಾಂಗ್ಲಾದೇಶ ವಿರುದ್ಧ ಎರಡೂ ಇನ್ನಿಂಗ್ಸ್ ಗಳಲ್ಲಿ ವಿಫಲ ರಾದ ಕರ್ನಾಟಕದ ಆರಂಭಕಾರ ಕೆ.ಎಲ್. ರಾಹುಲ್ ಕೂಡ ಇವರೊಂದಿಗೆ ಕಾಣಿಸಿಕೊಂಡರು. ಹೆಚ್ಚುವರಿ ಓಪನರ್ ಅಭಿನವ್ ಮುಕುಂದ್ ಕೂಡ ತಂಡದಲ್ಲಿದ್ದಾರೆ.
ಕೀಪಿಂಗಿಗೆ ಸಾಹಾವಿಕೆಟ್ ಕೀಪಿಂಗಿಗೆ “ಮೊದಲ ಆಯ್ಕೆಯ ಕೀಪರ್’ ವೃದ್ಧಿ ಮಾನ್ ಸಾಹಾ ಅವರನ್ನೇ ಮುಂದು ವರಿಸಲಾಯಿತು. ಸಾಹಾ ಬಾಂಗ್ಲಾ ವಿರುದ್ಧ ಶತಕ ಬಾರಿಸಿ ಗಮನ ಸೆಳೆದಿದ್ದರು. ವೇಗದ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ ಇದ್ದಾರೆ. ತವರಿನಲ್ಲಿ ಮೊದಲು
ಬಾಂಗ್ಲಾದೇಶ ವಿರುದ್ಧ ಮೊಳ ಗಿಸಿದ 208 ರನ್ನುಗಳ ಅಮೋಘ ಜಯಭೇರಿಯೊಂದಿಗೆ ಸುನೀಲ್ ಗಾವಸ್ಕರ್, ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ದಾಖಲೆ ಮುರಿದು ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ಆಸ್ಟ್ರೇಲಿಯ ವಿರುದ್ಧ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಪಾಲಿಗೆ ಇದು ಸವಾಲಿನ ಸರಣಿ. ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹಾ (ವಿ.ಕೀ.), ಆರ್. ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಕರುಣ್ ನಾಯರ್, ಜಯಂತ್ ಯಾದವ್, ಕುಲದೀಪ್ ಯಾದವ್, ಅಭಿನವ್ ಮುಕುಂದ್, ಹಾರ್ದಿಕ್ ಪಾಂಡ್ಯ.