Advertisement

ಚಾಂಡಿ ಕ್ಷೇತ್ರದಿಂದ ಅವರ ಕುಟುಂಬದವರೇ ಅಭ್ಯರ್ಥಿ: ಕಾಂಗ್ರೆಸ್ ಸ್ಪಷ್ಟ ನುಡಿ

03:47 PM Jul 23, 2023 | Team Udayavani |

ಕೊಚ್ಚಿ: ಕೇರಳ ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರು 53 ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಪುತ್ತುಪ್ಪಲ್ಲಿ ಕ್ಷೇತ್ರದಿಂದ ಅವರ ಕುಟುಂಬದ ಯಾರಾದರು ಒಬ್ಬರು ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಅವರು ಭಾನುವಾರ ಹೇಳಿದ್ದಾರೆ.

Advertisement

ಕ್ಷೇತ್ರದ ಕುರಿತು ಊಹಾಪೋಹಗಳು ಪ್ರಾರಂಭವಾದ ಕೆಲವೇ ಗಂಟೆಗಳ ನಂತರ, ಹಿರಿಯ ನಾಯಕನ ಕ್ಷೇತ್ರದ ಪ್ರತಿನಿಧಿಯ ಕುರಿತು ಕಾಂಗ್ರೆಸ್ ಈ ಸ್ಪಷ್ಟನೆ ನೀಡಿದೆ.

ಸಂಸದ ಸುಧಾಕರನ್ ಮಾತನಾಡಿ, ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅನಧಿಕೃತವಾಗಿ ಚರ್ಚೆ ಆರಂಭವಾಗಿದ್ದು, ಒಂದೆರಡು ದಿನಗಳ ನಂತರ ಅಧಿಕೃತವಾಗಲಿದೆ. ಆದರೆ, ಅದು ಚಾಂಡಿ ಅವರ ಕುಟುಂಬದವರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸುದ್ದಿಗಾರರಿಗೆ ಹೇಳಿದರು.

”ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಚಾಂಡಿ ಅವರ ಕುಟುಂಬದವರು ನಿರ್ಧರಿಸುತ್ತಾರೆ ಹೊರತು ಪಕ್ಷವಲ್ಲ.ಕೇರಳದ ಆಡಳಿತಾರೂಢ ಎಲ್‌ಡಿಎಫ್‌ಗೆ ಗೌರವವಿದ್ದರೆ, ಅವರು ಪುತ್ತುಪ್ಪಲ್ಲಿ ಕ್ಷೇತ್ರದಿಂದ ಅಭ್ಯರ್ಥಿ ಕಣಕ್ಕಿಳಿಸುವುದರಿಂದ ದೂರವಿರಬೇಕು ಎಂದು ಸುಧಾಕರನ್ ಹೇಳಿದರು.ಕಾಂಗ್ರೆಸ್ ಅಂತಹ ವಿನಂತಿಯನ್ನು ಮಾಡುವ ಅಗತ್ಯವಿಲ್ಲ. ಉಮ್ಮನ್ ಚಾಂಡಿ ಅವರ ಬಗ್ಗೆ ಅವರಿಗೆ ಗೌರವವಿದ್ದರೆ ಎಲ್‌ಡಿಎಫ್ ಅದನ್ನು ಸ್ವಂತವಾಗಿ ಮಾಡಬೇಕು”ಎಂದರು. ಜುಲೈ 18 ರಂದು ಚಾಂಡಿ ಅವರು ಬೆಂಗಳೂರಿನಲ್ಲಿ ನಿಧನ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next