Advertisement

ಬಿಜೆಪಿ ನಡವಳಿಕೆ ಗೊತ್ತಾಗಿ ಚಂದ್ರಶೇಖರ್‌ ಹಿಂದೆ ಸರಿದಿದ್ದಾರೆ; ಸಿಎಂ

12:34 PM Nov 01, 2018 | Team Udayavani |

ಬೆಂಗಳೂರು: ಬಿಜೆಪಿ ನಾಯಕರ ನಡವಳಿಕೆ ಗೊತ್ತಾಗಿ ರಾಮನಗರದ ಅಭ್ಯರ್ಥಿಯಾಗಿದ್ದ ಎಲ್‌.ಚಂದ್ರಶೇಖರ್‌ ಹಿಂದೆ ಸರಿದು ಪಕ್ಷ ತೊರೆದಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಯಾರನ್ನೂ ಖರೀದಿ ಮಾಡಿಲ್ಲ. ಬಿಜೆಪಿಯವರು ಆಮಿಷವೊಡ್ಡಿ  ಪಕ್ಷಕ್ಕೆ ಸೆಳೆದಿದ್ದರು. ಅಲ್ಲಿ ಹೋದ ಬಳಿಕ ಬಿಜೆಪಿ ನಾಯಕರ ನಡವಳಿಕೆ ಗೊತ್ತಾಗಿದೆ, ಹಾಗಾಗಿ ಚಂದ್ರಶೇಖರ್‌ ಪಕ್ಷ ತೊರೆದಿರಬಹುದು ಎಂದರು.

ನಾನು ನಮ್ಮ ಕಾರ್ಯಕರ್ತರಿಗೆ ಇನ್ನು ಎರಡು ದಿನ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲು ಬಯಸುತ್ತೇನೆ ಎಂದರು.

ಗುರುವಾರ ಬೆಳಗ್ಗೆ ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ  ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌  ಜೆಡಿಎಸ್‌ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ ಮಾತ್ರವಲ್ಲದೆ ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next