Advertisement

ಪತ್ನಿಯನ್ನು ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ : ಪುತ್ರನ ಸಾಕ್ಷಿಯಿಂದ ಆರೋಪ ಸಾಬೀತು

08:49 PM Dec 08, 2021 | Team Udayavani |

ಚಾಮರಾಜನಗರ:  ಕುಡಿದು ಜಗಳವಾಡಿ ಹೆಂಡತಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ತಾಲೂಕಿನ ಉತ್ತುವಳ್ಳಿ ಗ್ರಾಮದ ಮಂಜು ಎಂಬಾತನಿಗೆ ಜಿಲ್ಲಾ ಹೆಚ್ಚುವರಿ ಸೆಷೆನ್‌ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಉತ್ತುವಳ್ಳಿ ಗ್ರಾಮದ ಮಂಜು ಮದ್ಯವ್ಯಸನಿಯಾಗಿದ್ದು, ಪ್ರತಿ ದಿನ ಕುಡಿದು ಬಂದು ಪತ್ನಿ ಚಿಕ್ಕತಾಯಮ್ಮ ಅವರ ಜೊತೆ ಜಗಳವಾಡುತ್ತಿದ್ದ. 2017ರ ಅ. 26ರ ರಾತ್ರಿ 9.30ರ ರಾತ್ರಿ ಕುಡಿದು ಮನೆಗೆ ಬಂದಿದ್ದ. ಕುಡಿದು ಬಂದಿದ್ದನ್ನು ಚಿನ್ನತಾಯಮ್ಮ ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಜಗಳ ಮಾಡಿದ್ದ. ಬಳಿಕ ಮರದ ಪಟ್ಟಿಯಿಂದ ಚಿನ್ನತಾಯಮ್ಮ ಅವರ ತಲೆಗೆ ಹೊಡೆದು, ನಂತರ ತಲೆಯನ್ನು ಗೋಡೆಗೆ ಗುದ್ದಿಸಿ ಕೊಲೆಗೈದಿದ್ದ.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಜುನನ್ನು ಬಂಧಿಸಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ನಡೆಸಿದ್ದ ಅಂದಿನ ಇನ್‌ಸ್ಪೆಕ್ಟರ್ ಕೆ.ರಾಜೇಂದ್ರ ಅವರು ಮಂಜು ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಅಪರಾಧಿ ಮಂಜುವಿನ 13 ವರ್ಷದ ಪುತ್ರ ಪ್ರಕರಣದಲ್ಲಿ ಸಾಕ್ಷಿ ಹೇಳಿದ್ದ. ಆರೋಪ ಸಾಬೀತಾದ ಕಾರಣ, ಜಿಲ್ಲಾ ಹೆಚ್ಚುವರಿ ಸೆಷೆನ್‌ಸ್ ನ್ಯಾಯಾಧೀಶ ಎನ್.ಆರ್ .ಲೋಕಪ್ಪ ಅವರು ಮಂಜುಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ 2 ಲಕ್ಷ ರೂ. ದಂಡ ತೆರಲು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next