Advertisement

ನಗರ ಸ್ವಚ್ಛತೆಗೆ ಸ್ವಪ್ರೇರಣೆಯಿಂದ ಜೆಸಿಬಿ ನೀಡಿದ ಮಾಲೀಕರು

06:25 PM Apr 23, 2020 | Naveen |

ಚಳ್ಳಕೆರೆ: ಇಲ್ಲಿನ ಜೆಸಿಬಿ ಮಾಲೀಕರು ನಗರಸಭೆಗೆ ಉಚಿತವಾಗಿ ಜೆಸಿಬಿ ಒದಗಿಸಿ ಸ್ವಚ್ಚತಾ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ನಗರದ ಸ್ವತ್ಛತೆ ಬಗ್ಗೆ ಸಹಕಾರ ನೀಡಿದ ಜೆಸಿಬಿ ಮಾಲೀಕರಿಗೆ ಶಾಸಕ ಟಿ. ರಘುಮೂರ್ತಿ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

Advertisement

ನಗರಸಭಾ ಕಾರ್ಯಾಲಯದ ಮುಂದೆ ಸ್ವಯಂ ಪ್ರೇರಣೆಯಿಂದ ಜೆಸಿಬಿ ನೀಡಿದ ಜೆಸಿಬಿ ಮಾಲೀಕರಾದ ಕೆ. ಹನುಮಂತ ರೆಡ್ಡಿ, ಶ್ರೀನಿವಾಸ ರೆಡ್ಡಿ, ಎಚ್‌. ಲೋಕೇಶ್‌, ಎಚ್‌. ಜಗದೀಶ್‌, ವಿಜಯೇಂದ್ರ, ಗೋಪನಹಳ್ಳಿ ರವಿ, ಮಂಜುನಾಥ ರೆಡ್ಡಿ, ಶೇಖರ್‌, ಬಲರಾಮ್‌, ಹಾಯ್ಕಲ್‌ ಪ್ರಕಾಶ್‌ ಅವರನ್ನು ಶಾಸಕರು ಅಭಿನಂದಿಸಿದರು. ಪೌರಾಯುಕ್ತ ಪಿ. ಪಾಲಯ್ಯ, ತಹಶೀಲ್ದಾರ್‌ ಮಲ್ಲಿಕಾರ್ಜುನ, ಸಿಪಿಐ ಈ. ಆನಂದ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next