Advertisement

ಶುಶ್ರೂಷಕಿಯರ ಪಾತ್ರ ಮಹತ್ವದ್ದು: ಡಾ|ಬಸವರಾಜು

06:15 PM May 13, 2020 | Team Udayavani |

ಚಳ್ಳಕೆರೆ: ಆಸ್ಪತ್ರೆಗೆ ಬರುವ ರೋಗಿಗಳು ಶೀಘ್ರ ಗುಣಮುಖರಾಗಲು ಕೇವಲ ವೈದ್ಯರು ನೀಡಿದ ಔಷಧ ಮತ್ತು ಚಿಕಿತ್ಸೆಯಷ್ಟೇ ಸಾಧ್ಯವಾಗದು. ಅವರ ಯೋಗ್ಯಕ್ಷೇಮವನ್ನು ವಿಚಾರಿಸಿ ಮಾರ್ಗದರ್ಶನ ಮಾಡುವ ಶುಶ್ರೂಷಕಿಯರ ಪಾತ್ರವೂ ಪ್ರಮುಖವಾದುದು. ಆದ್ದರಿಂದ ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕೆಂದು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಬಸವರಾಜು ಹೇಳಿದರು.

Advertisement

ಮಂಗಳವಾರ ಆಸ್ಪತ್ರೆಯ ಸಭಾಂಗಣದಲ್ಲಿ ಕೇಕ್‌ ಕತ್ತರಿಸುವ ಮೂಲಕ ಶುಶ್ರೂಷಕಿಯರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಶುಶ್ರೂಷಕಿಯರು ಪ್ರಾಮಾಣಿಕತೆಯಿಂದ ರೋಗಿಗಳ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ವೈದ್ಯರು ಕೇವಲ ರೋಗಿಗಳಿಗೆ ಅವರ ರೋಗದ ಬಗ್ಗೆ ಮಾಹಿತಿ ನೀಡಿ ಔಷಧ ನೀಡುತ್ತಾರೆ. ಆದರೆ ಶುಶ್ರೂಷಕಿಯರು ಹಾಗಲ್ಲ. ಔಷಧ ಸೇವಿಸುವ ಸಮಯ ಮತ್ತು ವಿಧಾನವನ್ನು ತಿಳಿಸುವುದಲ್ಲದೆ ಎಚ್ಚರಿಕೆಯಿಂದ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ ಎಂದು ಶ್ಲಾಘಿಸಿದರು. ಮಕ್ಕಳ ತಜ್ಞ ಡಾ| ಜಿ. ತಿಪ್ಪೇಸ್ವಾಮಿ ಮಾತನಾಡಿ, ಶುಶ್ರೂಷಕಿಯರು ಆರೋಗ್ಯ ಇಲಾಖೆಯ ಅವಿಭಾಜ್ಯ ಅಂಗ. ಕೇವಲ ರೋಗಿಗಳ ಯೋಗಕ್ಷೇಮವಲ್ಲದೆ ವೈದ್ಯರ ಮಾರ್ಗದರ್ಶನವನ್ನೂ ಪಾಲಿಸಬೇಕಾಗುತ್ತದೆ. ಎಂತಹ ಸಂದರ್ಭದಲ್ಲೂ ವಿಚಲಿತರಾಗದೆ ರೋಗಿಗಳಿಗೆ ಧೈರ್ಯ ತುಂಬುತ್ತಾರೆ ಎಂದರು.

ಡಾ| ಬಿ.ಆರ್‌. ಮಂಜಪ್ಪ, ಸಾಯಿ ನಾಗಜ್ಯೋತಿ, ಓಂಕಾರಪ್ಪ, ವೆಂಕಟೇಶ್‌, ಹಿರಿಯ ಶುಶ್ರೂಷಕಿಯರಾದ ನಿರ್ಮಲಾ, ಪುಟ್ಟರಂಗಮ್ಮ, ಸುಮಿತ್ರಮ್ಮ, ರಂಗಮ್ಮ, ಹೊನ್ನಾವತಿ, ಸರಸ್ವತಿ, ಪ್ರೇಮಕುಮಾರಿ, ಶಶಿಕಲಾ, ಗೀತಮ್ಮ, ತಿಪ್ಪೇಸ್ವಾಮಿ, ಕಿರಣ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next