Advertisement

ಸಿಇಟಿ –  ರಾಜ್ಯಕ್ಕೆ 2ನೇ ರ್‍ಯಾಂಕ್ ಪಡೆದ ಮಹಾಲಿಂಗಪುರ ವಿದ್ಯಾರ್ಥಿ

08:56 PM Aug 21, 2020 | mahesh |

ಬಾಗಲಕೋಟೆ : ಜಿಲ್ಲೆಯ ಮಹಾಲಿಂಗಪುರದ ವೈದ್ಯರ ಪುತ್ರ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ.

Advertisement

ಮಹಾಲಿಂಗಪುರದ ವೈದ್ಯ ಡಾ|.ಎಸ್. ಚನ್ನಾಳ ಅವರ ಪುತ್ರ ಆರ್ಯನ್ ಚನ್ನಾಳ, ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದು, ಡಿ ಫಾರ್ಮಾ ಮತ್ತು ಬಿ ಫಾರ್ಮಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾನೆ. ಅಲ್ಲದೇ ಬಿಎನ್‌ವೈಎಸ್ (ಬ್ಯಾಚುಲರ್ ಆಫ್ ನ್ಯಾಚುಲಿಟಿ ಎಕ್ಷ ಯೋಗಾ ಸೈನ್ಸ) ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾನೆ.

ವೈದ್ಯ ಚನ್ನಾಳ ಅವರ ಪುತ್ರ ಆರ್ಯನ್ ಚನ್ನಾಳ, 1ರಿಂದ 5ನೇ ತರಗತಿಯನ್ನು ಸಮೀರವಾಡಿಯ ಕೆ.ಜೆ. ಸೋಮಯ್ಯ ಸಿಬಿಎಸ್‌ಸಿ ಶಾಲೆಯಲ್ಲಿ ಕಲಿತಿದ್ದು, 6ರಿಂದ 10ನೇ ತರಗತಿಯನ್ನು ಮಿಶ್ರಿಕೋಟೆಯ ಪರಿವರ್ತನ ಗುರುಕುಲದಲ್ಲಿ ಪೂರೈಸಿದ್ದಾನೆ. ಪಿಯುಸಿ ಶಿಕ್ಷಣವನ್ನು ರಾಜಸ್ಥಾನ ರಾದ ಕೋಟದ ಪ್ರಗತಿ ಪಬ್ಲಿಕ್ ಸ್ಕೂಲ್‌ನಲ್ಲಿ ಕಲಿತಿದ್ದು, ಪಿಯುಸಿಯಲ್ಲಿ ಶೇ.96.6ರಷ್ಟು ಅಂಕ ಪಡೆದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next