Advertisement

ಉಪಗ್ರಹ ಆಧಾರಿತ ಗಡಿ ಗುರುತು?

11:50 PM Aug 01, 2021 | Team Udayavani |

ಹೊಸದಿಲ್ಲಿ: ಅಸ್ಸಾಂ- ಮಿಜೋರಾಂ ನಡುವಿನ ಗಡಿ ಸಮಸ್ಯೆಗೆ ಇತಿಶ್ರೀ ಹಾಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಉಪಗ್ರಹ ಆಧಾರಿತ ಗಡಿ ಗುರುತು ತಂತ್ರಜ್ಞಾನದ ಮೂಲಕ ಎರಡೂ ರಾಜ್ಯಗಳ ಗಡಿಗಳನ್ನು ಮತ್ತೆ ಗುರುತಿಸಲು ತೀರ್ಮಾನಿಸಿದೆ. ಈ ಜವಾಬ್ದಾರಿಯನ್ನು ಈಶಾನ್ಯ ವಲಯದ ಬಾಹ್ಯಾಕಾಶ ತಂತ್ರಜ್ಞಾನ ಅನುಷ್ಠಾನ ಕೇಂದ್ರ (ಎನ್‌ಇಎಸ್‌ಎಸಿ) ಹಾಗೂ ಈಶಾನ್ಯ ವ್ಯವಹಾ ರಗಳ ಸಮಿತಿಗೆ (ಎನ್‌ಇಸಿ) ವಹಿಸಲಾಗಿದೆ.

Advertisement

ಜು. 26ರಂದು ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದಿದ್ದ ಗಡಿ ಘರ್ಷಣೆಯಲ್ಲಿ ಅಸ್ಸಾಂನ ಎಂಟು ಪೊಲೀಸರು ಹುತಾತ್ಮರಾಗಿ, ನಾಗರಿಕ ಸಾವಿಗೀಡಾಗಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ ಕಾ ರ, ಈ ಹೆಜ್ಜೆಯಿಟ್ಟಿದೆ.  ಮತ್ತೂಂದೆಡೆ, ಜು.26ರ ಘಟನೆಗೆ ಸಂಬಂಧಿಸಿದಂತೆ, ಅಸ್ಸಾಂ ಮುಖ್ಯಂಮತ್ರಿ ಹಿಮಂತ ಬಿಸ್ವಾಸ್‌ ವಿರುದ್ಧ ಮಿಜೋರಾಂ ಪೊಲೀಸರು ದಾಖಲಿಸಿದ್ದ ಎಫ್ಐಆರ್‌ ಅನ್ನು ಅಲ್ಲಿನ ಸರ ಕಾ ರ ಹಿಂಪಡೆದಿದೆ.

ಇನ್ನು, ಎರಡೂ ರಾಜ್ಯಗಳ ಮನವಿಯಂತೆ, ಕೇಂದ್ರೀಯ ಮೀಸಲು ಪಡೆಯನ್ನು (ಸಿಆರ್‌ಪಿಎಫ್) ಅಸ್ಸಾಂ- ಮಿಜೋರಾಂ ಗಡಿ ಭಾಗದ ಕಾವಲಿಗಾಗಿ ಕೇಂದ್ರ ಸರ ಕಾ ರ ರವಾನಿಸಿದ್ದು, ರವಿ ವಾ ರದಿಂದಲೇ ಸಿಆರ್‌ಪಿಎಫ್ ಯೋಧರು ಅಲ್ಲಿ ಶಾಂತಿ ಪಾಲನಾ ಪಡೆಯಂತೆ ಕಾರ್ಯ ನಿರ್ವಹಿಸಲಾರಂಭಿಸಿದ್ದಾರೆ.

ಅಮಿತ್‌ ಶಾ ಚರ್ಚೆ  :

ಎರಡೂ ರಾಜ್ಯಗಳ ಗಡಿ ಸಮಸ್ಯೆಗೆ ಸಂಬಂ ಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರವಿ ವಾ ರ ಅಸ್ಸಾಂ ಸಿಎಂ ಹಿಮಂತ ಬಿಸ್ವಾಸ್‌ ಶರ್ಮಾ, ಮಿಜೋರಾಂ ಸಿಎಂ ಝೊರಂತಂಗಾ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡೂ ರಾಜ್ಯಗಳು ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳು ವಂತೆ ಶಾ, ಇಬ್ಬರೂ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದು, ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next