Advertisement

ಪಟೇಲ್‌ ಏಕತಾ ಪ್ರತಿಮೆ ನಿರ್ಮಾಣಕ್ಕೆ ಕೇಂದ್ರದಿಂದ 300 ಕೋಟಿ

12:27 PM Jan 04, 2019 | Team Udayavani |

ಹೊಸದಿಲ್ಲಿ : ಗುಜರಾತ್‌ನ ನರ್ಮದಾ ಜಿಲ್ಲೆಯ ಕೇವಡಿಯಾ ದಲ್ಲಿ  ಈಚೆಗೆ ಸ್ಥಾಪನೆಗೊಂಡ ವಿಶ್ವದ ಅತೀ ಎತ್ತರದ ಸರ್ದಾರ್‌ ವಲ್ಲಭ ಭಾಯಿ ಅವರ ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಕೇಂದ್ರ ಸರಕಾರ 300 ಕೋಟಿ ರೂ. ನೀಡಿದೆ.

Advertisement

ಈ ಪ್ರತಿಮೆ ನಿರ್ಮಾಣದ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಸಾರ್ವಜನಿಕ ರಂಗದ (ಪಿಎಸ್‌ಯು) ಅಥವಾ ಕೇಂದ್ರ ಸಾರ್ವಜನಿಕ ಉದ್ಯಮ ಸಂಸ್ಥೆಗಳಿಗೆ ವಂತಿಗೆ ನೀಡುವಂತೆ ಯಾವುದೇ ನಿರ್ದೇಶ ನೀಡಿಲ್ಲ ಎಂದು ಕೇಂದ್ರ ಸಹಾಯಕ ಹಣಕಾಸು ಸಚಿವ ಪಿ ರಾಧಾಕೃಷ್ಣನ್‌ ಅವರು ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಉತ್ತರವಾಗಿ ಸಂಸತ್ತಿನಲ್ಲಿ  ಇಂದು ಶುಕ್ರವಾರ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರು 2018ರ ಅಕ್ಟೋಬರ್‌ 31ರಂದು ವಿಶ್ವದ ಈ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next