Advertisement

ನಾವೇನು ತಿನ್ನಬೇಕು ಎನ್ನುವುದನ್ನು ಸರಕಾರ ನಿರ್ಧರಿಸುವಂತಿಲ್ಲ : ಮಮತಾ

07:48 PM May 29, 2017 | Team Udayavani |

ಕೋಲ್ಕತ : “ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವು ಅಸಂವಿಧಾನಿಕವಾಗಿದೆ ಮಾತ್ರವಲ್ಲ ಇದು ಜಾತ್ಯತೀತ ವಿರೋಧಿ ಹಾಗೂ ಒಕ್ಕೂಟ ವ್ಯವಸ್ಥೆ ವಿರೋಧಿ ಕ್ರಮವಾಗಿದೆ’ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. 

Advertisement

“ನನ್ನ ಸರಕಾರ ಈ ಏಕಪಕ್ಷೀಯ ಕ್ರಮದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲಿದೆ; ಏಕೆಂದರೆ ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವಂತಿದೆ’ ಎಂದು ಮಮತಾ ಬ್ಯಾನರ್ಜಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

“ನಾವು ಏನನ್ನು ತಿನ್ನಬೇಕು ಎಂಬುದನ್ನು ಸರಕಾರ ನಿರ್ಧರಿಸುವಂತಿಲ್ಲ; ಆದ್ದರಿಂದ ಕೇಂದ್ರ ಸರಕಾರ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಕೂಡದೆಂದು ನಾನು ವಿನಂತಿಸುತ್ತೇನೆ’ ಎಂದು ಮಮತಾ ಹೇಳಿದರು. 

ದೇಶದಲ್ಲಿನ ಎಲ್ಲ ಜಾತ್ಯತೀತ ಪಕ್ಷಗಳು ನನ್ನ ಈ ನಿಲುವನ್ನು ಬೆಂಬಲಿಸಿವೆ. ಅಂತೆಯೇ ನಾವು ಒಗ್ಗೂಡಿ ಕೇಂದ್ರ ಸರಕಾರದ ಈ ಅಸಂವಿಧಾನಿಕ ಕ್ರಮದ ವಿರುದ್ಧ ಕಾನೂನು ರೀತ್ಯಾ ಹೋರಾಡುವೆವು ಎಂದು ಮಮತಾ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next