Advertisement

ಸಂಪುಟ ವಿಚಾರ: ಕೇಂದ್ರ ನಾಯಕರು ಶೀಘ್ರವೇ ತೀರ್ಮಾನ ಪ್ರಕಟಿಸಲಿದ್ದಾರೆ: ಬಿಎಸ್‌ವೈ

11:56 AM May 12, 2022 | Team Udayavani |

ಮೈಸೂರು: ಎರಡು ಮೂರು ದಿನದಲ್ಲೇ ಸಂಪುಟ ವಿಚಾರ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಈ ಬಗ್ಗೆ ಕೇಂದ್ರದ ನಾಯಕರು ಶೀಘ್ರವೇ ಈ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

Advertisement

ಬಿ.ವೈ.ವಿಜಯೇಂದ್ರ ಸೇರ್ಪಡೆ ಆಗುತ್ತಾರಾ, 17 ಜನ ಬಿಜೆಪಿಗೆ ಬಂದವರು ಸಚಿವರಾಗಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ “ನನಗೆ ಗೊತ್ತಿಲ್ಲ” ಎಂದಷ್ಟೇ ಬಿಎಸ್ ವೈ ಉತ್ತರಿಸಿದರು.

ಇದನ್ನೂ ಓದಿ:ಹೊರಟ್ಟಿ ಬಿಜೆಪಿ ಸೇರ್ಪಡೆಗೆ ದಿನಾಂಕ ನಿಗದಿ!

ಇದು ಭ್ರಷ್ಟ ಸರಕಾರ, ಇವರು ದುರ್ಬಲ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್‌ವೈ, ಯಾರು ದುರ್ಬಲರಿದ್ದರೋ, ಯಾರು ಭ್ರಷ್ಟರಿದ್ದೋ ಅವರ ಬಾಯಲ್ಲಿ ಅದೇ ಮಾತು ಬರುತ್ತಿದೆ. ಸಿದ್ದರಾಮಯ್ಯ ಕಾಲದಲ್ಲಿ ಏನೇನಾಯ್ತು ಎಂಬ ಕಥೆ ಜಗತ್ತಿಗೆ ಗೊತ್ತಿದೆ. ವಿಪಕ್ಷ ನಾಯಕರು ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next