Advertisement

ತಾಲಿಬಾನ್‌ ಪ್ರತಿನಿಧಿಗಳ ಜತೆಗೆ ಕೇಂದ್ರ ಸರಕಾರದ ಮಾತುಕತೆ

07:58 AM Jun 23, 2021 | Team Udayavani |

ವಾಷಿಂಗ್ಟನ್‌: ಅಫ್ಘಾನಿಸ್ಥಾನದಲ್ಲಿರುವ ತಾಲಿಬಾನ್‌ ಉಗ್ರ ಸಂಘಟನೆಯ ಪ್ರತಿನಿಧಿಗಳ ಜತೆಗೆ ಭಾರತ ಸರಕಾರ ಮಾತುಕತೆ ನಡೆಸಿದೆ. ಈ ಬಗ್ಗೆ ಕತಾರ್‌ ಸರಕಾರದ ವಿಶೇಷ ಪ್ರತಿನಿಧಿ ಮುತಾಲಿಕ್‌ ಬಿನ್‌ ಮಜೀದ್‌ ಅಲ್‌ ಖತಾನಿ ಮಾಹಿತಿ ನೀಡಿದ್ದಾರೆ.

Advertisement

ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ಅರಬ್‌ ಸೆಂಟರ್‌ ಅಫ್ಘಾನಿಸ್ಥಾನದ ಶಾಂತಿ ಪ್ರಕ್ರಿಯೆ ಬಗ್ಗೆ ಆಯೋಜಿಸಿದ್ದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಇದನ್ನು ಪ್ರಕಟಿಸಿದ್ದಾರೆ. ಆಫ್ಘಾನಿಸ್ಥಾನದಲ್ಲಿ ಭಾರತ ಹೊಂದಿರುವ ಭಾಗೀದಾರಿಕೆ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಪ್ರತಿನಿಧಿ ಝಲ್ಮೆ„ ಖಾಲಿಝಾದ್‌ “ಶಾಂತಿ ಸ್ಥಾಪನೆಗಾಗಿ ಎಲ್ಲರೂ ವಿವಿಧ ರೀತಿಯಲ್ಲಿ ಪ್ರಯತ್ನಿಸಬೇಕಾಗಿದೆ. ಅದುವೇ ಈಗಿನ ಅಗತ್ಯತೆ’ ಎಂದರು.

ಅಫ್ಘಾನ್ ನಿಂದ ಅಮೆರಿಕದ ಸೇನೆ ವಾಪಸಾಗುವ ಪ್ರಕ್ರಿಯೆ ನಡೆದಿರುವಂತೆಯೇ ಕುವೈಟ್‌ ಮತ್ತು ಕೀನ್ಯಾ ಪ್ರವಾಸಕ್ಕಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ದೋಹಾಕ್ಕೆ 2 ಬಾರಿ ಭೇಟಿ ನೀಡಿದ್ದರು. ಅಲ್ಲಿ ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಪ್ರತಿನಿಧಿ ಝಲ್ಮೆ„ ಖಾಲಿಝಾದ್‌ ಅವರನ್ನೂ ಭೇಟಿಯಾಗಿದ್ದರು. ಕತಾರ್‌ ಸರಕಾರದ ಪ್ರತಿನಿಧಿಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕೇಂದ್ರ ನಿರಾಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next