Advertisement

ಕೇಂದ್ರ ಟೀಕೆ ಭಾಷಣಕ್ಕೆ ಕತ್ತರಿ

06:50 AM Jan 23, 2018 | Harsha Rao |

ತಿರುವನಂತಪುರಂ: ವಿಧಾನಸಭೆ ಅಧಿವೇಶನದ ಆರಂಭದ ದಿನದ ಭಾಷಣದಲ್ಲಿ ಕೇಂದ್ರವನ್ನು ಟೀಕಿಸಿ ಕೇರಳ ರಾಜ್ಯ ಸರಕಾರ ಬರೆದುಕೊಟ್ಟಿದ್ದ ಪಠ್ಯವನ್ನು ರಾಜ್ಯಪಾಲ ನ್ಯಾ| ಪಿ.ಸದಾಶಿವಂ ಕೈಬಿಟ್ಟಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಗಳ ಹಕ್ಕನ್ನು ಕೇಂದ್ರ  ಕಿತ್ತುಕೊಳ್ಳುತ್ತಿದೆ ಎಂಬ ಪಠ್ಯ ಭಾಷಣದಲ್ಲಿತ್ತು. ಆದರೆ ಭಾಷಣ ಓದುವಾಗ ರಾಜ್ಯಪಾಲರು ಈ ಸಾಲುಗಳನ್ನು ಓದಲಿಲ್ಲ. ಈ ಪಠ್ಯವನ್ನೂ ಒಳಗೊಂಡ ಭಾಷಣದ ಮುದ್ರಿತ ಪ್ರತಿಯನ್ನು ಶಾಸಕರು ಮತ್ತು ಮಾಧ್ಯಮಗಳಿಗೆ ನೀಡಲಾಗಿತ್ತು. 

Advertisement

ಕೇರಳದಲ್ಲಿ ಕೆಲವು ಕೋಮು ಶಕ್ತಿಗಳು ಕೋಮು ಸೌಹಾರ್ದತೆಯನ್ನು ಕದಡುತ್ತಿರುವುದರ ಹೊರತಾಗಿ, ರಾಜ್ಯದಲ್ಲಿ ಯಾವುದೇ ಕೋಮು ಘರ್ಷಣೆ ನಡೆದಿಲ್ಲ ಎಂಬ ಪಠ್ಯವನ್ನೂ ಭಾಷಣದಲ್ಲಿ ಸೇರಿಸಲಾಗಿತ್ತು. ಆದರೆ, ಅದನ್ನೂ ರಾಜ್ಯಪಾಲ ಸದಾಶಿವಂ ಓದಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next