Advertisement

ಕೇಂದ್ರ ಬಜೆಟ್‌ ಕಾರ್ಮಿಕ-ಜನವಿರೋಧಿ: ಸಿಐಟಿಯು ಆಕ್ರೋಶ

01:24 PM Feb 06, 2022 | Team Udayavani |

ಲಿಂಗಸುಗೂರು: ಕೇಂದ್ರ ಸರ್ಕಾರ 2022-23ನೇ ಸಾಲಿನ ಮಂಡಿಸಿದ ಬಜೆಟ್‌ ಕಾರ್ಮಿಕ ಮತ್ತು ಜನವಿರೋಧಿ ನೀತಿಯಿಂದ ಕೂಡಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು) ತಾಲೂಕು ಘಟಕ ಶನಿವಾರ ಆಕ್ರೋಶ ವ್ಯಕ್ತಪಡಿಸಿತು.

Advertisement

ಪಟ್ಟಣದ ಗಡಿಯಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಆರೋಗ್ಯ ಮಿಷನ್‌, ಅಂಗನವಾಡಿಗಳಿಗೆ ಅನುದಾನ ಹೆಚ್ಚಿಸಲಾಗಿಲ್ಲ. ರಾಷ್ಟ್ರಕ್ಕೆ ಸಂಪತ್ತು ಸೃಷ್ಟಿಸುವ ದುಡಿಯುವ ಜನರಿಗೆ ಬಜೆಟ್‌ ಸಂಪೂರ್ಣವಾಗಿ ನಿರ್ಲಕ್ಷಿಸಿ ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಿ ಬಡ ಜನರನ್ನು ವಂಚಿಸಿದೆ. ಕಾರ್ಪೋರೇಟ್‌ ವಲಯಗಳಿಗೆ ಉದಾರತೆ ತೋರಿದೆ.

ಕೇಂದ್ರದ ಬಜೆಟ್‌ ಜನರ ಜೀವನೋಪಾಯದ ಮೇಲೆ ತೀವ್ರ ತರವಾದ ಹೊಡೆತ ನೀಡಿ ಬಡತನ ತರಲಿದೆ. ಮೂಲ ಸೌಕರ್ಯ, ಉತ್ಪಾದನೆ ಮತ್ತು ಖನಿಜ ಕ್ಷೇತ್ರಗಳನ್ನು ಖಾಸಗೀಕರಣ ಮೂಲಕ ಹತಾಶೆ ಮತ್ತು ವಿನಾಶಕಾರಿ ಹಿನ್ನೆಲೆಯಲ್ಲಿ ರೂಪಿಸಲಾಗಿದೆ. ಈ ಬಜೆಟ್‌ ಸರ್ವಾಧಿಕಾರಿ ಮತ್ತು ಜನವಿರೋಧಿ, ವಿಧ್ವಂಸಕ ಪ್ರವೃತ್ತಿ ಬಹಿರಂಗ ಪಡಿಸುತ್ತದೆ. ಇಂತಹ ಬಜೆಟ್‌ ಸಂಪೂರ್ಣ ಜನವಿರೋಧಿ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಸಂಪೂರ್ಣ ವಿನಾಶಕಾರಿಯಾಗಿದೆ ಎಂದು ಆರೋಪಿಸಿದರು.

ಸಿಐಟಿಯು ಮುಖಂಡರಾದ ರಮೇಶ ವೀರಾಪುರ, ನಿಂಗಪ್ಪ ವೀರಾಪುರ, ಮಹ್ಮದ್‌ ಅನೀಫ್‌, ಬಾಬಾಜಾನಿ, ಮಲ್ಲೇಶ ಮ್ಯಾಗೇರಿ, ಶಿವರಾಜ ಕಪಗಲ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next