Advertisement

ಅಪಪ್ರಚಾರ ನಿಲ್ಲಿಸಲು ಪಾಕ್‌ಗೆ ಕೇಂದ್ರ ಎಚ್ಚರಿಕೆ

11:56 PM Jul 08, 2021 | Team Udayavani |

ಹೊಸದಿಲ್ಲಿ:  ಜಮಾತ್‌- ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ನ ಲಾಹೋರ್‌ ನಿವಾಸದ ಬಳಿ ಇತ್ತೀಚೆಗೆ ಸಂಭವಿಸಿದ್ದ  ಸ್ಫೋಟದ ಹಿಂದೆ ಭಾರತದ ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ ಕುತಂತ್ರವಿದೆ ಎಂದಿರುವ ಪಾಕ್‌ ಸರಕಾರದ ಹೇಳಿಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಂ ಬಗಚಿ “ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ’ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

“ಮೊದಲು ನಿಮ್ಮ (ಪಾಕ್‌) ನೆಲದಲ್ಲಿರುವ ಉಗ್ರರನ್ನು ಮಟ್ಟ ಹಾಕುವ ಕೆಲಸದಲ್ಲಿ ವಿಶ್ವಾಸಾರ್ಹವಾಗಿ ನಡೆಸಿ. ಅಲ್‌-ಕಾಯಿದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್‌ ಲಾಡೆನ್‌ನನ್ನೂ ಪಾಕಿಸ್ಥಾನ‌ ಸರಕಾರ ಹುತಾತ್ಮ ಎಂದು ಕರೆಯುತ್ತದೆ.

ಹೀಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪಾಕಿಸ್ಥಾನ‌ ಯಾವ ರೀತಿ ಉಗ್ರಗಾಮಿಗಳಿಗೆ ಮತ್ತು ಸಂಘಟನೆಗಳಿಗೆ ನೆರವು ನೀಡುತ್ತದೆ ಎಂಬ ಸ್ಪಷ್ಟವಾಗಿ ಗೊತ್ತಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next