Advertisement

Censor Board officer: ಲಂಚಕ್ಕೆ ಬೇಡಿಕೆ; ಸೆನ್ಸಾರ್‌ ಮಂಡಳಿ ಅಧಿಕಾರಿ ಬಂಧನ

10:47 AM Nov 29, 2023 | Team Udayavani |

ಬೆಂಗಳೂರು: ಸಿನಿಮಾಗಳಿಗೆ ಸೆನ್ಸಾರ್‌ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಪ್ರಾದೇಶಿಕ ಅಧಿಕಾರಿ ಪ್ರಶಾಂತ್‌ಕುಮಾರ್‌ ಎಂಬವರು ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Advertisement

ಸಿನಿಮಾ ನಿರ್ಮಾಪಕ ಎ.ವಿ. ನಾಗರಾಜ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾ ರಿಗಳು, ದೂರುದಾರರಿಂದ ಪ್ರಶಾಂತ್‌ಕುಮಾರ್‌ 12 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಂಧಿಸಿದ್ದಾರೆ.

ಬಂಧಿತ ಪ್ರಶಾಂತ್‌ಕುಮಾರ್‌, ಸಿನಿಮಾಗಳಿಗೆ ಸೆನ್ಸಾರ್‌ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಮಧ್ಯೆ ದೂರು ದಾರ ನಾಗರಾಜ್‌ ತಮ್ಮ ಸಂವಿಧಾನ ಸಿನಿ ಕಂಬೈನ್ಸ್‌ ಅಡಿಯಲ್ಲಿ ಅಡವಿ ಎಂಬ ಸಿನಿಮಾ ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡು ನ.20ರಂದು ಮಲ್ಲೇಶ್ವರಂನ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಸೆನ್ಸಾರ್‌ ಮಂಡಳಿಗಾಗಿ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ, ಪ್ರಶಾಂತ್‌ಕುಮಾರ್‌, ಸಿನಿಮಾಗೆ ಸಬ್‌ ಟೈಟಲ್‌ ಹಾಕಿಲ್ಲ, ಇತರೆ ಕಾರಣ ನೀಡಿ ತಗಾದೆ ತೆಗೆದು, ಮತ್ತೂಮ್ಮೆ ಸ್ಕ್ರಿನಿಂಗ್‌ ಮಾಡಬೇಕೆಂದು ಹೇಳಿದ್ದರು. ಬಳಿಕ ಪರಿಚಯಸ್ಥರೊಬ್ಬರು ಪ್ರಶಾಂತ್‌ಕುಮಾರ್‌ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಅವರಿಗೆ 20 ಸಾವಿರ ರೂ. ಕೊಟ್ಟರೆ ಪ್ರಮಾಣ ಪತ್ರ ನೀಡುವುದಾಗಿ ಹೇಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next