Advertisement

ಭಾರೀ ಹೊಡೆತ ಬಿದ್ದರೂ ಗಡಿಯಲ್ಲಿ ಗುಂಡಿನ ದಾಳಿ ಮುಂದುವರಿಸಿದ ಪಾಕ್‌

03:49 PM Feb 26, 2019 | Team Udayavani |

ಶ್ರೀನಗರ: ವಾಯುದಾಳಿ ನಡೆಸಿ 300 ಕ್ಕೂ ಹೆಚ್ಚು ಉಗ್ರರನ್ನು ನಾಶಗೈದ ಬಳಿಕ ಮಂಗಳವಾರ ಸಂಜೆ ಪಾಕಿಸ್ಥಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದೆ. ಅಖ್‌ನೂರ್‌ ಮತ್ತು ನೌಶೇರಾ ಸೆಕ್ಟರ್‌ನಲ್ಲಿ  ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಯೋಧರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

Advertisement

ಪಾಕ್‌ ದಾಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕೃಷ್ಣ ಘಾಟಿ ಸೆಕ್ಟರನಲ್ಲೂ ಸಂಜೆ 5.30 ರ ವೇಳೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿದೆ.

ದಾಳಿಗೆ ಪಾಕ್‌ ಪಡೆಗಳು ಮೋರ್‌ಟಾರ್‌ ಶೆಲ್‌ಗ‌ಳನ್ನ  ಬಳಸಿಕೊಂಡಿದೆ.

ಪಾಕ್‌ ಗಡಿಯುದ್ಧಕ್ಕೂ ಹದ್ದಿನ ಕಣ್ಣು ಇರಿಸಲಾಗಿದ್ದು ಸೇನೆ ಸರ್ವ ಸನ್ನದ್ಧವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next