Advertisement

ಜ|ರಾವತ್ ದಂಪತಿ ಪಂಚಭೂತಗಳಲ್ಲಿ ಲೀನ : ಪುತ್ರಿಯರಿಂದ ಅಂತಿಮ ವಿಧಿ

05:27 PM Dec 10, 2021 | Team Udayavani |

ನವದೆಹಲಿ : ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮಡಿದಿದ್ದ ದೇಶದ ಮೂರು ಸಶಸ್ತ್ರ ಪಡೆಗಳ ಮೊತ್ತಮೊದಲ ಮುಖ್ಯಸ್ಥ (ಸಿಡಿಎಸ್‌) ಜ| ಬಿಪಿನ್‌ ರಾವತ್‌ ಮತ್ತು ಪತ್ನಿ ಮಧುಲಿಕಾ ರಾವತ್‌ ಅವರ ಅಂತ್ಯಕ್ರಿಯೆ ಶುಕ್ರವಾರ ದೆಹಲಿ ಕಂಟೋನ್ಮೆಂಟ್‌ನಲ್ಲಿರುವ ಬ್ರಾರ್ ಸ್ಕ್ವೇರ್ ರುದ್ರ ಭೂಮಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನಡೆಸಲಾಯಿತು.

Advertisement

ಒಂದೇ ಚಿತೆಯಲ್ಲಿ ದಂಪತಿಗಳನ್ನು ಮಲಗಿಸಿ ಅಗ್ನಿ ಸ್ಪರ್ಷ ಮಾಡಲಾಯಿತು. ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅಂತಿಮ ವಿಧಿಗಳನ್ನು ನೆರವೇರಿಸಿದರು.

ಅಂತಿಮ ಯಾತ್ರೆಯ ವೇಳೆ ಸಾವಿರಾರು ಜನರು ಗೌರವ ನಮನ ಸಲ್ಲಿಸಿದರು. 17 ಸುತ್ತು ಕುಶಾಲ ತೋಪುಗಳನ್ನು ಹಾರಿಸಿ ರಾವತ್ ಅವರಿಗೆ ಗೌರವ ಸಲ್ಲಿಸಲಾಯಿತು.

ಜನರಲ್ ಬಿಪಿನ್ ರಾವತ್ ಅವರಿಗೆ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ , ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಗೌರವ ಸಲ್ಲಿಸಿದರು.

Advertisement

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್ಎಸ್ಎ ಅಜಿತ್ ದೋವಲ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಮೂರು ಸೇನಾ ಮುಖ್ಯಸ್ಥರಾದ ,ಭೂ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.

ಬಿಪಿನ್ ಜಿ ಕಾ ನಾಮ್ ರಹೇಗಾ

ರಾವತ್ ದಂಪತಿಗಳ ಪಾರ್ಥಿವ ಶರೀರ ದೆಹಲಿ ಕಂಟೋನ್ಮೆಂಟ್‌ನಲ್ಲಿರುವ ಬ್ರಾರ್ ಸ್ಕ್ವೇರ್ ಸ್ಮಶಾನದ ಕಡೆಗೆ ಸೇನಾ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿರುವಾಗ ನಾಗರಿಕರು “ಜಬ್ ತಕ್ ಸೂರಜ್ ಚಾಂದ್ ರಹೇಗಾ, ಬಿಪಿನ್ ಜಿ ಕಾ ನಾಮ್ ರಹೇಗಾ” ಎಂಬ ಘೋಷಣೆಗಳನ್ನು ಮೊಳಗಿಸಿದರು.

ಫ್ರಾನ್ಸ್ ರಾಯಭಾರಿಯಿಂದ ಅಂತಿಮ ನಮನ

ಫ್ರಾನ್ಸ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಅವರು ಅಂತಿಮ ನಮನ ಸಲ್ಲಿಸಿ, ನಾನು ಗೌರವವನ್ನು ಸಲ್ಲಿಸಿ, ನಾವು ಒಬ್ಬ ಮಹಾನ್ ಮಿಲಿಟರಿ ನಾಯಕ, ದೃಢವಾದ, ದೃಢನಿಶ್ಚಯ ಮತ್ತು ನನ್ನ ದೇಶದೊಂದಿಗೆ ಸಹಕಾರವನ್ನು ಮುಂದುವರಿಸಲು ಉತ್ತಮ ಸ್ನೇಹಿತನನ್ನ ಸದಾ ನೆನಪಿಸಿಕೊಳ್ಳುತ್ತೇವೆ ಎಂದರು.

ಬ್ರಿಟಿಷ್ ಹೈ ಕಮಿಷನರ್ ಅಂತಿಮ ನಮನ

ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಅಂತಿಮ ನಮನ ಸಲ್ಲಿಸಿ, ಇದು ನಂಬಲಾಗದಷ್ಟು ದುಃಖಕರವಾಗಿದೆ. ಯುಕೆಯಲ್ಲಿ ನಾವು ಜಂಟಿ ರಕ್ಷಣಾ ವಿಧಾನವನ್ನು ಪ್ರಾರಂಭಿಸಿದ ಪ್ರವರ್ತಕರಾಗಿದ್ದವರು ರಾವತ್. ಅವರು ಭಾರತದಲ್ಲಿ ಸೇನೆಯನ್ನು ಮುನ್ನಡೆಸಿದರು. ಭಾರತವು ಒಬ್ಬ ಮಹಾನ್ ನಾಯಕ, ಸೈನಿಕ ಮತ್ತು ಸಂಪೂರ್ಣವಾಗಿ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ತುಂಬಾ ದುಃಖಕರ ಎಂದರು.

ಶ್ರೀಲಂಕಾದ ಹೈ ಕಮಿಷನರ್ ಗೌರವ

ಇದು ನಿಜವಾದ ದುರಂತ. ನಮ್ಮ ಅಧ್ಯಕ್ಷರು ಇಂದು CDS ಅಂತಿಮ ಕಾರ್ಯಕ್ಕೆ ಶ್ರೀಲಂಕಾದ ಸೇನಾ ಕಮಾಂಡ್ ಅನ್ನು ರಾಯಭಾರಿಯಾಗಿ ಕಳುಹಿಸಿದ್ದಾರೆ. ನಾವು ಎದೆಗುಂದಿದ್ದೇವೆ, ನಮ್ಮ ಸೇನೆಯ ಅನೇಕ ಹಿರಿಯ ಸಿಬ್ಬಂದಿ ಅವರನ್ನು ಚೆನ್ನಾಗಿ ತಿಳಿದಿದ್ದಾರೆ. ಅವರು ಶ್ರೀಲಂಕಾದ ಸ್ನೇಹಿತ ಎಂದು ಶ್ರೀಲಂಕಾದ ಹೈ ಕಮಿಷನರ್ ಮಿಲಿಂದ ಮೊರಗೋಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next