Advertisement

ಪರಸ್ಪರ ಸಿಹಿ ಹಂಚಿ-ಪಟಾಕಿ ಸಿಡಿಸಿ ಸಂಭ್ರಮ

12:43 PM Mar 12, 2017 | |

ಹೊನ್ನಾಳಿ: ಪಂಚರಾಜ್ಯಗಳ ಚುನಾವಣಾ ಎಣಿಕೆ ಕಾರ್ಯದ ಫಲಿತಾಂಶದಲ್ಲಿ ಬಿಜೆಪಿ ಅದ್ಭುತ ಜಯಗಳಿಸಿದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. 

Advertisement

ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧರಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‌ಷಾರ ರಾಜಕೀಯ ಚಾಣಕ್ಯ ನೀತಿಯಿಂದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಿಜಿಪಿ ಪರ ಬಂದಿದೆ.

ದೇಶದ ಅತಿದೊಡ್ಡ ರಾಜ್ಯವಾದಉತ್ತರ ಪ್ರದೇಶದಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳಾದ ಎಸ್‌ಪಿ, ಬಿಎಸ್‌ಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯವಾಗಿ ಗೂಂಡಾ ರಾಜ್ಯವಾಗಿ ಮಾರ್ಪಟ್ಟಿದೆ. ಜಾತಿ ಮತಪಂಥ ಮೀರಿ ಪ್ರಧಾನಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿಗೆ ಪ್ರಚಂಡ ಗೆಲುವು ನೀಡಿರುವುದು ಹರ್ಷ ತಂದಿದೆ ಎಂದರು.

ಜಿಪಂ ಸದಸ್ಯರಾದ ಎಂ.ಆರ್‌ ಮಹೇಶ್‌, ಸುರೇಂದ್ರನಾಯ್ಕ ಪಪಂ ಸದಸ್ಯರಾದ ಕುಬೇಂದ್ರಪ್ಪ, ಹೊಸಕೇರೆ ಸುರೇಶ್‌, ಹೊಸಕೇರೆ ಸುರೇಶ್‌, ಸರಳಿನಮನೆ ಮಂಜು, ಟೆ ಪ್ರಶಾಂತ, ಸಿ.ಆರ್‌.ಶಿವಾ ನಂದ್‌, ಮಾರುತಿ ನಾಯಕ್‌, ಮಂಜುನಾಥ್‌, ಪ್ರಭು, ಕಿಟ್ಟಿಮುರಾರಿ, ರಂಗಪ್ಪ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next