Advertisement

ಬೆಳಗಾವಿ ಕಣದಲ್ಲಿ ಏನಾಗಲಿದೆ ಸಿ.ಡಿ. ಪ್ರಕರಣ?

12:22 AM Mar 22, 2021 | Team Udayavani |

ಬೆಳಗಾವಿ: ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ  ರಮೇಶ್‌ ಜಾರಕಿಹೊಳಿ ಅವರದ್ದೆನ್ನ ಲಾದ ಸಿ.ಡಿ. ಪ್ರಕರಣ ಯಾವ ಪಾತ್ರ ವಹಿಸಲಿದೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ.

Advertisement

ಪ್ರಕರಣದಲ್ಲಿ ಜಾರಕಿಹೊಳಿ ಕುಟುಂಬದ ಹೆಸರು ಪ್ರಸ್ತಾವ ವಾಗಿರುವುದರಿಂದ  ಇದನ್ನು ಅಸ್ತ್ರ ವಾಗಿಸುವುದು ಕಾಂಗ್ರೆಸ್‌ಗೆ ಸುಲಭ ವಾಗಿಲ್ಲ.  ಕಾಂಗ್ರೆಸ್‌ಗೆ ಇದು ಬಹು ಉತ್ತಮ ಆಹಾರ ಎನ್ನುವಂತಿದ್ದರೂ ಸತೀಶ್‌ ಜಾರಕಿಹೊಳಿ ಕಾರಣದಿಂದ ಅದನ್ನು ನುಂಗುವ ಸ್ಥಿತಿಯಲ್ಲಿಲ್ಲ.

ಉಪ ಚುನಾವಣೆಯಲ್ಲಿ ಸಿ.ಡಿ. ಪ್ರಕರಣದ ಮುಜುಗರದಿಂದ  ಪಾರಾಗುವುದು ಹೇಗೆಂಬ ಸವಾಲು ಬಿಜೆಪಿಗೆ ಬಂದಿದೆ.  ಪ್ರಚಾರದ ಸಂದರ್ಭದಲ್ಲಿ ಯಾವುದೇ ಕಾರ ಣಕ್ಕೂ ಅದು ಪ್ರಸ್ತಾವವಾಗದಂತೆ  ಮತದಾರರ ಗಮನವನ್ನು ಹೇಗೆ ಬೇರೆಡೆ ಸೆಳೆಯಬೇಕು ಎಂಬ ಬಗ್ಗೆ ಬಿಜೆಪಿ ಚಿಂತನೆ ನಡೆದಿದೆ.

ಕಾಂಗ್ರೆಸ್‌ನಲ್ಲಿ ಸತೀಶ ಜಾರಕಿ ಹೊಳಿ ಅವರು ಕೆಪಿಸಿಸಿ ಕಾರ್ಯಾ ಧ್ಯಕ್ಷರಾಗಿರುವುದು ಹಾಗೂ ಚುನಾ ವಣೆಯ ಉಸ್ತುವಾರಿ ಹೊತ್ತಿರು ವುದರಿಂದ ಪಕ್ಷದ ನಾಯಕರು ಇಕ್ಕಟ್ಟಿ ನಲ್ಲಿದ್ದಾರೆ. ಒಂದು ವೇಳೆ ಸತೀಶ್‌ ಜಾರಕಿಹೊಳಿಯೇ ಸ್ಪರ್ಧಿಸಿದರೆ ಸಿ.ಡಿ. ವಿವಾದ ಬಳಸುವುದರಿಂದ ಪರೋಕ್ಷವಾಗಿ ಕಾಂಗ್ರೆಸ್‌ಗೂ ಹಾನಿ ಯಾದೀತೇ ಎಂಬ ಪ್ರಶ್ನೆ ಮೂಡಿದೆ.

ಸತೀಶ್‌ ಜಾಣ ನಡೆ :

Advertisement

ಸಿ.ಡಿ. ವಿಷಯ ಬಹಿರಂಗವಾದ  ಬಳಿಕ ಸತೀಶ್‌ ಜಾರಕಿಹೊಳಿ ಅಧಿವೇಶನದಲ್ಲಿ ಭಾಗವಹಿಸಿಲ್ಲ.  ಈ ವಿಷಯ ಪಕ್ಷದೊಳಗೆ ಚರ್ಚೆಯಾಗದಂತೆ ನೋಡಿಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕರೂ   ಅಂತರ ಕಾಯ್ದು ಕೊಂಡಿದ್ದಾರೆ. ಹೀಗಿರು ವಾಗ ಸತೀಶ್‌ ಜಾರಕಿಹೊಳಿ ಅವರು ಚುನಾವಣೆಯಲ್ಲಿ ಸಿ.ಡಿ. ವಿಷಯವನ್ನು ಪ್ರಸ್ತಾ ವಿಸುವುದು ಕಷ್ಟ ಎನ್ನಲಾಗುತ್ತಿದೆ.

ಉಸ್ತುವಾರಿ ಸಮಸ್ಯೆ :

ಗಡಿ ಜಿಲ್ಲೆಯಲ್ಲಿ ಈಗ  ಉಪ ಚುನಾ ವಣೆಯದ್ದೇ ಚರ್ಚೆ. ಕೊರೊನಾ ಭೀತಿ ಮತ್ತೆ ಕಾಣಿಸಿಕೊಂಡಿದ್ದರೂ ಚುನಾವಣೆ  ಮೇಲೆ  ಪರಿಣಾಮ ಬೀರಿಲ್ಲ ಎಂಬುದಕ್ಕೆ ಭರ್ಜರಿ ಸಿದ್ಧತೆಗಳೇ ಸಾಕ್ಷಿ.  ಚುನಾವಣೆ ವೇಳೆ ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿರುವುದು ಬಿಜೆಪಿ ಉಸ್ತುವಾರಿ ವಿಷಯ. ಜಿಲ್ಲೆಯ ಯಾವ ನಾಯಕರ ಹೆಗಲಿಗೆ ಈ ಹೊಣೆ ಬೀಳಲಿದೆ ಎಂಬ ಕುತೂ ಹಲವಿದೆ. ಸಿ.ಡಿ. ಪ್ರಕರಣದಲ್ಲಿ ಸಿಲುಕಿರುವ  ರಮೇಶ್‌ ಜಾರಕಿಹೊಳಿ ಪಾತ್ರ ಏನು, ರಮೇಶ್‌ ಇಲ್ಲದಿದ್ದರೆ ಬಾಲಚಂದ್ರ ಜಾರಕಿಹೊಳಿ ಏನು ಮಾಡುತ್ತಾರೆಂಬ ಚರ್ಚೆ ನಡೆಯುತ್ತಿದೆ.

ಸಿ.ಡಿ. ಪ್ರಕರಣಕ್ಕೆ ಮೊದಲು ರಮೇಶ್‌ ಜಾರಕಿಹೊಳಿ ಅವರು, ಬೆಳಗಾವಿಯಲ್ಲಿ ಬಿಜೆಪಿ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದು, ಅದಕ್ಕಾಗಿ ತಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎನ್ನುತ್ತಿದ್ದರು. ಈಗ ಅವರು ಬಹಿರಂಗವಾಗಿ ಕಾಣಿಸಿಕೊಳ್ಳದಿರುವುದು ಬೆಂಬಲಿ ಗರಲ್ಲಿ ನಿರಾಸೆ ಮೂಡಿಸಿದೆ.

ಮೂರು ಕ್ಷೇತ್ರಗಳ ಮೇಲೆ ಪರಿಣಾಮ? :

ಸಿ.ಡಿ. ಪ್ರಕರಣ ಮೂರು ಕ್ಷೇತ್ರಗಳ ಉಪ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆಯೇ ಎನ್ನುವ ಚರ್ಚೆ ಆರಂಭವಾಗಿದೆ. ಅದರಲ್ಲೂ ಬೆಳಗಾವಿ ಹಾಗೂ ಮಸ್ಕಿ ಕ್ಷೇತ್ರದ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಉಸ್ತುವಾರಿಗೆ ಸವದಿ, ಕತ್ತಿ ಪೈಪೋಟಿ  :

ಸಿ.ಡಿ. ಪ್ರಕರಣಕ್ಕೆ ಮುನ್ನ ಬಿಜೆಪಿ ಸಿದ್ಧಪಡಿಸಿದ್ದ ಉಪ ಚುನಾವಣೆ ಉಸ್ತುವಾರಿ ಪಟ್ಟಿಯಲ್ಲಿ  ರಮೇಶ್‌ ಜಾರಕಿಹೊಳಿ ಹೆಸರಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು,  ಉಸ್ತುವಾರಿ ಪೈಪೋಟಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉಮೇಶ್‌ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

 

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next