Advertisement

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?

05:09 PM Sep 29, 2023 | Team Udayavani |

ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿ ಶುಕ್ರವಾರ ಬೆಂಗಳೂರು ಸೇರಿ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಬಂದ್ ಆಚರಿಸಿ ಹೋರಾಟ ತೀವ್ರ ಗೊಂಡಿರುವ ವೇಳೆ ‘ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ ?’ ಎಂದು ನಟ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಟ್ವೀಟ್ ಮಾಡಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Advertisement

‘ಕಾವೇರಿ ಮತ್ತು ನಂಬಿಕೆ …..ಹಲವು ವರುಷಗಳ ಅನುಭವವಿರುವ ನಾವೇ ಆಯ್ಕೆ ಮಾಡಿರುವ ನಮ್ಮ ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ ? ನಾಳೆ ನೀರಿನ ಸಮಸ್ಯೆಯಾದರೆ ನಮ್ಮ ಜನಪ್ರತಿನಿಧಿಗಳೇ ಅದನ್ನು ಪರಿಹರಿಸಬೇಕಲ್ಲವೇ ? ವರ್ಷಗಳಿಂದ ಅಂಕಿ ಅಂಶಗಳನ್ನು ನೀಡಿ ವಾದಿಸುತ್ತಿರುವ ಕಾನೂನು ತಜ್ಞರಿಗಿಂತ ನಮಗೆ ತಿಳುವಳಿಕೆ ಇದೆಯೇ ? ಆತಂಕ ಏಕೆ ?” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಹೋರಾಟಕ್ಕೆ ಚಿತ್ರರಂಗ ಬೆಂಬಲ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಬೃಹತ್ ವೇದಿಕೆಯಲ್ಲಿ ಚಿತ್ರರಂಗದ ಹಿರಿಯ ಕಲಾವಿದರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಉಪೇಂದ್ರ ಅವರೂ ಹೋರಾಟದಲ್ಲಿ ಭಾಗಿಯಾದರು. ಡಾ. ಶಿವರಾಜ್​ಕುಮಾರ್​, ಚಾಲೆಂಜಿಂಗ್ ಸ್ಟಾರ್ ದರ್ಶನ್ , ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ, ಶ್ರೀನಾಥ್, ಹಂಸಲೇಖ, ದುನಿಯಾ ವಿಜಯ್ ,ಧ್ರುವ ಸರ್ಜಾ, ಸುಂದರ್​ ರಾಜ್,ಪ್ರಮೀಳಾ ಜೋಷಾಯ್​, ಶ್ರೀನಿವಾಸ​ ಮೂರ್ತಿ, ಅನು ಪ್ರಭಾಕರ್​,ಗಿರಿಜಾ ಲೋಕೇಶ್, ಅನುಶ್ರೀ ಪೂಜಾ ಗಾಂಧಿ, ಚಿಕ್ಕಣ್ಣ, ರಘು ಮುಖರ್ಜಿ, ತಬಲ ನಾಣಿ, ಅನಿರುದ್ಧ್​ ಜತ್ಕರ್​ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next