Advertisement

ಕೇರಳ: ಚರ್ಚ್‌ ನಲ್ಲಿ ಇನ್ನು ಮುಂದೆ ಬಟ್ಟೆಯಲ್ಲಿ ಕಟ್ಟಿ ಶವ ಹೂಳಲು ನಿರ್ಧಾರ

09:31 PM Sep 06, 2022 | Team Udayavani |

ಆಲಪ್ಪುಳ: ಕೇರಳದ ಆಲಪ್ಪುಳ ಜಿಲ್ಲೆಯ ಅರ್ತುಂಕಲ್‌ ಎಂಬಲ್ಲಿ ಇರುವ ಸೈಂಟ್‌ ಜಾರ್ಜ್‌ ಚರ್ಚ್‌ ಇನ್ನು ಮುಂದೆ ಶವಗಳನ್ನು ಹೂಳಲು ಮರದಿಂದ ಸಿದ್ಧಗೊಳಿಸಿದ ಶವಪೆಟ್ಟಿಗೆ ಬಳಕೆಗೆ ವಿದಾಯ ಹೇಳಲು ನಿರ್ಧರಿಸಿದೆ.

Advertisement

ಅದರ ಬದಲಾಗಿ ಹತ್ತಿಯಿಂದ ಸಿದ್ಧಗೊಳಿಸಿದ ಬಟ್ಟೆಯನ್ನು ಬಳಕೆ ಮಾಡಲಿದೆ. ಈ ತಿಂಗಳ 1ನೇ ತಾರೀಕಿನಿಂದಲೇ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.

ಸದ್ಯದ ಪದ್ಧತಿಯಲ್ಲಿ ಹೂಳಲಾಗಿರುವ ಶವಗಳು ಕೊಳೆತು, ಮಣ್ಣಿಗೆ ಸೇರ್ಪಡೆಯಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಚರ್ಚ್‌ ಆಡಳಿತ ಮಂಡಳಿ ಮತ್ತು ಅದರ ವ್ಯಾಪ್ತಿಯ 949 ಕುಟುಂಬಗಳ ಜತೆಗೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸದ್ಯದ ವ್ಯವಸ್ಥೆಯಲ್ಲಿ ಶವ ಹೂಳಲೂ ಸ್ಥಳ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚರ್ಚ್‌ನ ಸಮಿತಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next