Advertisement

ಮನೆಯ ಬಾಗಿಲು ಬಡಿದು, ತಮಾಷೆ ಮಾಡುತ್ತಿದ್ದ ಮೂವರು ಹುಡುಗರ ಹತ್ಯೆ ಕೇಸು: ಭಾರತೀಯ ದೋಷಿ

07:54 PM Apr 30, 2023 | Team Udayavani |

ನ್ಯೂಯಾರ್ಕ್‌:ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವ್ಯಕ್ತಿಯೊಬ್ಬರ ಮನೆಯ ಬಾಗಿಲು ಬಡಿದು, ತಮಾಷೆ ಮಾಡುತ್ತಿದ್ದ ಮೂವರು ಹುಡುಗರನ್ನು ಹತ್ಯೆಮಾಡಿರುವ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ದೋಷಿ ಎಂದು ಪರಿಗಣಿಸಲಾಗಿದೆ.

Advertisement

2020ರ ಜನವರಿಯಲ್ಲಿ ರಿವರ್‌ಸೈಟ್‌ ಕೌಂಟಿ ನಿವಾಸಿಯಾಗಿರುವ ಅನುರಾಗ್‌ ಚಂದ್ರ ಅವರ ಮನೆಯ ಬಾಗಿಲನ್ನು ಮೂವರು ಹುಡುಗರು ಪದೆ ಪದೇ ಬಡಿಯುತ್ತಿದ್ದರು. ಟ್ರೂಥ್‌ ಆರ್‌ ಡೇರ್‌ ಗೇಮ್‌ನ ಭಾಗವಾಗಿ ಅನುರಾಗ್‌ ಮನೆ ಬಾಗಿಲು ತಟ್ಟಿ ಚುಡಾಯಿಸಿದ್ದರು. ಆದರೆ, ಪಾನಮತ್ತರಾಗಿದ್ದ ಅನುರಾಗ್‌ ಇದು ಗೇಮ್‌ ಎಂದು ಅರಿಯದೆ ಹುಡುಗರ ಜತೆಗೆ ಜಗಳವಾಡಿದ್ದರು. ಜತೆಗೆ ಅವರನ್ನು ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next