Advertisement

ಕೋವಿಡ್‌ ನಿಯಮ ಉಲ್ಲಂಘನೆ : ಹಸೆ ಮಣೆ ಏರಿದ ದಿನವೇ ಪೊಲೀಸ್ ಠಾಣೆಗೆ

05:39 PM Apr 24, 2021 | Team Udayavani |

ಸಂಕೇಶ್ವರ: ಕೋವಿಡ್‌ ನಿಯಮ ಪಾಲನೆ ಮಾಡದೆ ಅದ್ಧೂರಿ ಮದುವೆ ಆಯೋಜಿಸಿದ್ದ ವಧು-ವರ ಹಾಗೂ ಅವರ ಕುಟುಂಬಸ್ಥರ ಮತ್ತು ಮಂಗಲ ಕಾರ್ಯಾಲಯದ ಮಾಲೀಕರ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಶುಕ್ರವಾರ ನಡೆದಿದೆ.

Advertisement

ನಿಡಸೋಸಿ ರಸ್ತೆಯಲ್ಲಿನ ಮಿಲನ್‌ ಮಂಗಲ ಕಾರ್ಯಾಲಯದಲ್ಲಿ ಮದುವೆಗೆ ವಧು, ವರನ ಕುಟುಂಬಸ್ಥರು ಅದ್ಧೂರಿ ಆಯೋಜನೆ ಮಾಡಿಕೊಂಡಿದ್ದರು. ಸರ್ಕಾರಿ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಹುಬ್ಬಳ್ಳಿ ಮೂಲದ ವರ ಕಾರ್ತಿಕ್‌ ಗಾಯಕವಾಡ್‌, ಸಂಕೇಶ್ವರ ಮೂಲದ ವಧು ಮೇಘ ದವಡತೆ ಹಾಗೂ ಕಲ್ಯಾಣ ಮಂಟಪದ ಮಾಲೀಕ ಝಾಕರೀಯಾ ಸೇರಿದಂತೆ ಒಟ್ಟು 7 ಜನರ ವಿರುದ್ಧ ಸಂಕೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಸೆಮಣೆ ಏರಿದ ದಿನವೇ ವಧು-ವರರು ಠಾಣೆ ಮೆಟ್ಟಿಲು ಏರುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next