Advertisement

ಷರತ್ತು ಉಲ್ಲಂಘನೆ; ಜೋಗದಲ್ಲಿ ಏಳು ಜನರ ವಿರುದ್ಧ ಪ್ರಕರಣ

08:57 PM Aug 20, 2021 | Team Udayavani |

ಸಾಗರ: ಜೋಗ ಜಲಪಾತ ವೀಕ್ಷಣೆಯ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು ವಿಧಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಅಲಕ್ಷಿಸಿ, ಹಣ ಪಡೆದು ಅಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ ಒದಗಿಸುತ್ತಿದ್ದ ಏಳು ಜನರ ವಿರುದ್ಧ ನ್ಯಾಯಾಲಯದಲ್ಲಿ ಸಾಗರದ ಡಿವೈಎಸ್‌ಪಿ ಕಚೇರಿ ದೂರು ದಾಖಲಿಸಿದೆ.

Advertisement

ಕೊರೊನಾದ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೆ ಹಾಗೂ 72 ಗಂಟೆಯೊಳಗಿನ ಆರ್‌ಟಿಪಿಸಿ ನೆಗೆಟಿವ್ ವರದಿ ತಂದವರಿಗೆ ಮಾತ್ರ ಜೋಗದ ವೀಕ್ಷಣೆಗೆ ಅವಕಾಶ ಕಲ್ಪಿಸುವ ಷರತ್ತು ಹಾಕಲಾಗಿತ್ತು. ಆದರೆ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಗೇಟ್ ನಿರ್ವಹಣೆಯಲ್ಲಿದ್ದ ಮೂವರು ಹೋಂ ಗಾರ್ಡ್‌ಗಳು, ಮೂವರು ರಕ್ಷಣಾ ಸಿಬ್ಬಂದಿ ಹಾಗೂ ಸಹಕಾರ ನೀಡುತ್ತಿದ್ದ ಓರ್ವ ಸ್ಥಳೀಯ ಅಂಗಡಿಯಾತ ಪ್ರವಾಸಿಗರಿಂದ ಪ್ರಮಾಣ ಪತ್ರ ದೃಢೀಕರಿಸದೆ, ಲಂಚ ಪಡೆದು ಒಳಬಿಡುತ್ತಿದ್ದುದು ಗುರುವಾರ ನಡೆದ ಪೊಲೀಸ್ ತಪಾಸಣೆಯ ವೇಳೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಸದಾಶಿವ ಆಯೋಗದ ವರದಿಯಲ್ಲಿ ಯಾವುದೇ ಸಮುದಾಯವನ್ನು ಮೀಸಲಾತಿಯಡಿ ಕೈಬಿಡುವ ಅಂಶವೇ ಇಲ್ಲ

ಆರೋಪಿಗಳಾದ ಚಂದ್ರಶೇಖರ ಶಿರೂರು, ಮಂಜುನಾಥ ಲಂಬಾಣಿ, ಕೃಷ್ಣಪ್ಪ ಜೋಗ, ಮಂಜುನಾಥ ಮರಾಠಿಕೇರಿ, ರಾಕೇಶ ಜೋಗ, ಪ್ರಭುದಾಸ ಜೋಗ ಹಾಗೂ ಸಂಜು ಮಂಜುನಾಥ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಲಸಿಕೆ ಅಥವಾ ಆರ್‌ಟಿಪಿಸಿಆರ್ ತಪಾಸಣೆ ನಡೆಸುವ ಇಲ್ಲಿನ ಸೆಕ್ಯುರಿಟಿಯವರು ಲಂಚದ ಆಸೆಗೆ ಪ್ರಯಾಣಿಕರಿಗೆ ಜೋಗ ಜಲಪಾತದ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯ ಅನ್ವಯ ತನಿಖೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next