Advertisement

Belthangady ಶಾಸಕ ಹರೀಶ್‌ ಪೂಂಜಾ ವಿರುದ್ಧ ಪ್ರಕರಣ: ಬಿಜೆಪಿ ಖಂಡನೆ  

08:15 PM Oct 18, 2023 | Team Udayavani |

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.

Advertisement

ಅರಣ್ಯ ಇಲಾಖೆಯ ಅಧಿಕಾರಿಗಳಿಂದ ದೌರ್ಜನ್ಯಕ್ಕೊಳಗಾದ ಬಡ ಕುಟುಂಬದ ಪರವಾಗಿ ನಿಂತಿರುವ ಶಾಸಕರ ಮೇಲೆ ಸರಕಾರ ಅರಣ್ಯ ಇಲಾಖೆಯ ಅಧಿಕಾರಿಗಳ ಮುಖಾಂತರ ಪ್ರಕರಣ ದಾಖಲಿಸಿದೆ. ಅರಣ್ಯ ಅಧಿಕಾರಿಗಳ ದೌರ್ಜನ್ಯವನ್ನು ಕಂಡಾಗ ನಾವು ಪ್ರಜಾಪ್ರಭುತ್ವ ರಾಜ್ಯದಲ್ಲಿದ್ದೇವಾ ಅಥವಾ ಗೂಂಡಾ ಪ್ರವೃತಿಯ ರಾಜ್ಯದಲ್ಲಿದ್ದೇವಾ ಎಂದು ಸಂಶಯ ಬರುತ್ತಿದೆ.

ಕ್ಷೇತ್ರದ ಬಡ ಕುಟುಂಬದ ಪರವಾಗಿ ನಿಂತು ಅರಣ್ಯ ಅಧಿಕಾರಿಗಳ ದೌರ್ಜನ್ಯವನ್ನು ನಿಲ್ಲಿಸಿದ ಶಾಸಕ ಹರೀಶ್‌ ಪೂಂಜಾರ ನಡೆ ಸರಿಯಾಗಿದೆ. ಜನರ ಮೇಲೆ ಸರಕಾರಿ ಅಧಿಕಾರಿಗಳು ದೌರ್ಜನ್ಯವೆಸಗಿದಾಗ ಶಾಸಕರು ಕೈಕಟ್ಟಿ ಕೂರಬೇಕಾ? ಸರಕಾರಿ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ದುರಾದೃಷ್ಟ.

ಶಿವಮೊಗ್ಗದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಮೇಲೆ ಕಲ್ಲು ಎಸೆದ ಮತಾಂಧರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಹಿಂದೇಟು ಹಾಕಿದ್ದರು. ಸರಕಾರಿ ಅಧಿಕಾರಿಗಳಿಗೆ ಜನರೇ ರಕ್ಷಣೆ ನೀಡುವುದು ಹೊರತು ಸರಕಾರ ರಕ್ಷಣೆ ನೀಡುವುದಿಲ್ಲ. ಆದುದರಿಂದ ಜನರ ಜೊತೆ ನಿಂತ ಶಾಸಕ ಹರೀಶ್‌ ಪೂಂಜಾರವರ ಮೇಲೆ ದಾಖಲಿಸಿದ ಕರ್ತವ್ಯಕ್ಕೆ ಅಡ್ಡಿ ಮಾಡಿದರೆಂಬ ಸುಳ್ಳು ಪ್ರಕರಣವನ್ನು ಸರಕಾರ ಕೂಡಲೇ ಕೈಬಿಡಬೇಕೆಂದು ಸುದರ್ಶನ ಮೂಡುಬಿದಿರೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next