Advertisement

ಮದುವೆಗೆ 50ಕ್ಕಿಂತ ಹೆಚ್ಚು ಜನರು ಸೇರಿದರೆ ಹುಷಾರ್‌!

10:18 AM Jul 06, 2020 | mahesh |

ಉಡುಪಿ: ಪ್ರತಿ ಮದುವೆಗೆ ತಹಶೀಲ್ದಾರರಿಂದ ಅನುಮತಿ ಪಡೆಯಬೇಕಿದ್ದು 50ಕ್ಕಿಂತ ಹೆಚ್ಚು ಜನರು ಸೇರಬಾರದು ಎಂಬ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಇದೀಗ ಗ್ರಾಮಕರಣಿಕರು, ಕಂದಾಯ ಪರಿವೀಕ್ಷಕರು ಪೊಲೀಸರೊಂದಿಗೆ ರ್‍ಯಾಂಡಮ್‌ ಆಗಿ ಮದುವೆ ಸಭಾಂಗಣಕ್ಕೆ ಭೇಟಿ ನೀಡಿ 50 ಜನರಿಗಿಂತ ಹೆಚ್ಚಿಗೆ ಸೇರಿದ್ದಾರೋ ಎಂದು ತಪಾಸಣೆ ಮಾಡಲಿದ್ದಾರೆ. ಮದುವೆಯಲ್ಲಿ 50 ಜನರಿಗಿಂತ ಹೆಚ್ಚಿಗೆ ಸೇರುತ್ತಿರುವುದು ಗಮನಕ್ಕೆ ಬರುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಎಲ್ಲ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಂದು ವೇಳೆ 50ಕ್ಕಿಂತ ಅಧಿಕ ಜನರು ಸೇರಿದ್ದರೆ ಸಂಬಂಧಪಟ್ಟ ತಹಶೀಲ್ದಾರರನ್ನೇ ಹೊಣೆ ಮಾಡಲಾಗುವುದು. ಇಲ್ಲವಾದರೆ ಕೋವಿಡ್ ಹಾವಳಿಯನ್ನು ನಿಯಂತ್ರಿಸಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ. ಜುಲೈ ಅಂತ್ಯದ ವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next