Advertisement

ಕಾರು ಢಿಕ್ಕಿ: ದ್ವಿಚಕ್ರ ವಾಹನ ಸವಾರರಿಗೆ ಗಾಯ

10:28 AM May 29, 2018 | Team Udayavani |

ಬಂಟ್ವಾಳ: ಫರಂಗಿಪೇಟೆಯಲ್ಲಿ ಮೇ  28ರಂದು ಬೆಳಗ್ಗೆ ನಿಯಂತ್ರಣ ತಪ್ಪಿದ ಕಾರು ಎರಡು ದ್ವಿಚಕ್ರವಾಹನಗಳಿಗೆ ಢಿಕ್ಕಿ ಹೊಡೆದು ಸವಾರರು ಗಾಯಗೊಂಡಿದ್ದಾರೆ.

Advertisement

ಗಾಯಾಳುಗಳಾದ ವಾಮಂಜೂರು ನಿವಾಸಿ ತಿಲಕ್‌ ಹಾಗೂ ಸಾಲೆತ್ತೂರು ನಿವಾಸಿ ಉಮರ್‌ ಫಾರೂಕ್‌ ಅವರನ್ನು ತುಂಬೆ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರಿಬ್ಬರು ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ದುರ್ಘ‌ಟನೆ ನಡೆದಿತ್ತು.  
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್‌ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.  

Advertisement

Udayavani is now on Telegram. Click here to join our channel and stay updated with the latest news.

Next