Advertisement

ಪತ್ನಿಯ ಹೆಸರನ್ನೂ ಎಳೆತಂದು ಅವಮಾನ ಮಾಡಲಾಗಿದೆ : ಬಿಕ್ಕಿ ಬಿಕ್ಕಿ ಅತ್ತ ಚಂದ್ರಬಾಬು ನಾಯ್ಡು

09:24 AM Nov 20, 2021 | Team Udayavani |

ಹೈದರಾಬಾದ್‌: ತೆಲುಗು ದೇಸಂ ಪಾರ್ಟಿ (ಟಿಡಿಪಿ)ಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಶುಕ್ರವಾರದಂದು ಮಾಧ್ಯಮ­ಗಳೆದುರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Advertisement

ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ವಿಧಾನಸಭೆಯಲ್ಲಿ ಇಷ್ಟೊಂದು ಅವಮಾನ­ವನ್ನು ಹಿಂದೆಂದೂ ಅನುಭವಿಸಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

“ನಾನು ಎರಡೂವರೆ ವರ್ಷಗಳಿಂದ ಎಲ್ಲ ಅವಮಾನವನ್ನು ಶಾಂತರೀತಿಯಲ್ಲಿ ಸಹಿಸಿಕೊಂಡು ಬಂದಿದ್ದೇನೆ. ಆದರೆ ಇಂದು ನನ್ನ ಪತ್ನಿಯ ಹೆಸರನ್ನೂ ಎಳೆತಂದು ಅವಮಾನ ಮಾಡಲಾಗಿದೆ. ಅದನ್ನು ಪ್ರಶ್ನಿಸಲು ಹೋದರೆ, ಸ್ಪೀಕರ್‌ ನನ್ನ ಮೈಕ್‌ ಅನ್ನೇ ಆಫ್ ಮಾಡಿದ್ದಾರೆ. ಈ ರೀತಿಯ ಅವಮಾನವನ್ನು ನನ್ನಿಂದ ಸಹಿಸಲಾ­ಗುವುದಿಲ್ಲ’ ಎಂದು ಅವರು ಮಾಧ್ಯಮದವರೆದುರು ಅಳುತ್ತಾ ಹೇಳಿ­ಕೊಂಡಿದ್ದಾರೆ.

ಇದನ್ನೂ ಓದಿ:ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ

ವಿಧಾನಸಭೆಯಲ್ಲಿ ಆಡಳಿತ ಪಕ್ಷವಾಗಿ­ರುವ ವೈಎಸ್‌ಆರ್‌ಸಿಪಿಯ ನಾಯಕ­ರೊಂದಿಗೆ ಮನಸ್ತಾಪ ಮಾಡಿಕೊಂಡು, ಸಭೆಯಿಂದ ಹೊರನಡೆ­ದಿದ್ದ ಅವರು, “ನಾನು ಮತ್ತೆ ವಿಧಾನ­ಸಭೆಯ ಮೆಟ್ಟಿಲೇರಿದರೆ ಅದು ಮುಖ್ಯಮಂತ್ರಿಯಾಗಿಯೇ’ ಎಂದು ಶಪಥವನ್ನೂ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next