Advertisement

ಮಾತುಕತೆ ಭಾಗಶಃ ಯಶಸ್ವಿ:ರೈತರ ಎರಡು ಬೇಡಿಕೆ ಈಡೇರಿಸಲು ಕೇಂದ್ರದ ಸಮ್ಮತಿ,ಜ.4ಕ್ಕೆ ಮತ್ತೆ ಸಭೆ

07:40 PM Dec 30, 2020 | Team Udayavani |

ನವದೆಹಲಿ:ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಜತೆಗೆ ಬುಧವಾರ (ಡಿಸೆಂಬರ್ 30, 2020) ಕೇಂದ್ರ ಸರ್ಕಾರ ನಡೆಸಿದ ಆರನೇ ಸುತ್ತಿನ ಮಾತುಕತೆಯಲ್ಲಿ ಎರಡು ಬೇಡಿಕೆಯನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದ್ದು, ಕೃಷಿ ಕಾಯ್ದೆ ಮತ್ತು ಎಂಎಸ್ ಪಿ ಬಗ್ಗೆ ಜನವರಿ 4ರಂದು ಚರ್ಚಿಸುವುದಾಗಿ ತಿಳಿಸಿದೆ.

Advertisement

ಇಂದು ನಡೆದ ಮಾತುಕತೆ ಉತ್ತಮ ವಾತಾವರಣ ಇದ್ದು, ಆಶಾದಾಯಕವಾಗಿ ಮಾತುಕತೆ ಮುಕ್ತಾಯಗೊಂಡಿದೆ. ನಾಲ್ಕು ಪ್ರಮುಖ ಬೇಡಿಕೆಗಳಲ್ಲಿ 2 ಬೇಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಇನ್ನು ಎರಡು ಬೇಡಿಕೆ ಬಗ್ಗೆ ಜ.4ರ ಮಾತುಕತೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ದೆಹಲಿ ಗಡಿಯಲ್ಲಿ ರೈತರು ಕೇಂದ್ರ ಜಾರಿಗೆ ತಂದ ಮೂರು ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಏತನ್ಮಧ್ಯೆ ಆರನೇ ಸುತ್ತಿನ ಮಾತುಕತೆಗೆ ಒಪ್ಪಿಗೆ ನೀಡಿರುವ 40 ರೈತ ಸಂಘಟನೆಗಳು ಮಾತುಕತೆ ಮುನ್ನ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟಿದ್ದವು.

ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು, ಕನಿಷ್ಠ ಬೆಂಬಲ ಬೆಲೆಗೆ ಮಾನ್ಯತೆ ನೀಡಬೇಕು ಹಾಗು ಈ ಹಿಂದೆ ಪ್ರಸ್ತಾಪಿಸಿರುವ ಎರಡು ಅಂಶಗಳ ಬಗ್ಗೆ ಚರ್ಚೆ ನಡೆಸುವುದಾಗಿ ಒಪ್ಪಿಗೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next