Advertisement

ಸಂಬಳ ಕೊಡಲು ದುಡ್ಡಿಲ್ಲ; ಬೇರೆ ಉದ್ಯೋಗ ಸೇರಿಕೊಳ್ಳಿ: ಚೋಕ್ಸಿ

03:54 PM Feb 24, 2018 | Team Udayavani |

ಹೊಸದಿಲ್ಲಿ : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 11,400 ಕೋಟಿ ರೂ. ಸಾಲ ವಂಚನೆ ಮಾಡಿರುವ ಹಗರಣದಲ್ಲಿ ವಿದೇಶಕ್ಕೆ ಪಲಾಯನ ಮಾಡಿರುವ ಓರ್ವ ಪ್ರಮುಖ ಆರೋಪಿ ಮತ್ತು ಗೀತಾಂಜಲಿ ಜೆಮ್ಸ್‌ ಪ್ರಮೋಟರ್‌ ಆಗಿರುವ ಮೆಹುಲ್‌ ಚೋಕ್ಸಿ ಅವರು ತನ್ನ ಕಂಪೆನಿಯ ಉದ್ಯೋಗಿಗಳಿಗೆ, “ನಿಮಗಿನ್ನು ಸಂಬಳ ಪಾವತಿಸಲು ಸಾಧ್ಯವಾಗುವುದಿಲ್ಲ; ಬೇರೆ ಉದ್ಯೋಗ ನೋಡಿಕೊಳ್ಳಿ’ ಎಂದು ಹೇಳಿರುವುದಾಗಿ ವರದಿಯಾಗಿದೆ.

Advertisement

ಗೀತಾಂಜಲಿ ಜೆಮ್ಸ್‌ನ ಭಾರತೀಯ ಉದ್ಯೋಗಿಗಳಿಗೆ ನಿನ್ನೆ ಶುಕ್ರವಾರ ಮೆಹೂಲ್‌ ಚೋಕ್ಸಿ ಬರೆದಿರುವ ಪತ್ರದಲ್ಲಿ ಹೀಗೆ ಹೇಳಿದ್ದಾರೆ :

“ನಿಮಗೆ ಬಾಕಿ ಇರುವ ಹಣವನ್ನು ಪಾವತಿಸುವುದಕ್ಕಾಗಲೀ, ಮುಂಬರುವ ತಿಂಗಳ ಸಂಬಳವನ್ನು ಕೊಡುವುದಕ್ಕಾಗಲೀ ನಮಗೆ ಸಾಧ್ಯವಿಲ್ಲ. ನಮ್ಮ ಸಂಸ್ಥೆಯ ವಿವಿಧ ಬ್ಯಾಂಕ್‌ ಖಾತೆಗಳನ್ನು ತನಿಖಾಧಿಕಾರಿಗಳು ಅನುಚಿತ ಕ್ರಮವಾಗಿ ಸ್ತಂಭನಗೊಳಿಸಿದ್ದಾರೆ. ನಮ್ಮ ಮಳಿಗೆಗಳ ವಿದ್ಯುತ್‌ ಶುಲ್ಕ, ನಿರ್ವಹಣಾ ಖರ್ಚು ವೆಚ್ಚಗಳನ್ನು ಕೂಡ ನಿಭಾಯಿಸಲು ನಮಗೆ ಆಗಲಾದರು. ಆದುದರಿಂದ ನೀವೆಲ್ಲ ಬೇರೆ ಉದ್ಯೋಗಗಳನ್ನು ಕಂಡುಕೊಳ್ಳಿ ಎಂದು ವಿನಂತಿಸುತ್ತೇನೆ. 

Advertisement

Udayavani is now on Telegram. Click here to join our channel and stay updated with the latest news.

Next