Advertisement

ಮಾ.15ರೊಳಗೆ ಅಭ್ಯರ್ಥಿಗಳ ಹೆಸರು ಘೋಷಣೆ: ಖಂಡ್ರೆ

01:24 AM Mar 07, 2019 | Team Udayavani |

ಭಾಲ್ಕಿ: ಮಾ.15ರೊಳಗಾಗಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಾಗಿ ಸ್ಪರ್ಧೆ ನಡೆಯುತ್ತಿದೆ. ಸೀಟು ಹಂಚಿಕೆ ಪ್ರಕ್ರಿಯೆ ಶುರುವಾಗಿದೆ.

Advertisement

ಮಾ.7ರಂದು ಪ್ರದೇಶ ಸಮಿತಿ ಸಭೆ ನಡೆಯಲಿದೆ. ಮಾ.11ಕ್ಕೆ ದೆಹಲಿಯಲ್ಲಿ ವರಿಷ್ಠರೊಂದಿಗೆ ಸಭೆ ನಡೆದ ನಂತರ, ಮಾ.15ಕ್ಕೂ ಮುನ್ನವೇ ಎಲ್ಲಾ ಲೋಕಸಭಾ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದರು. ಇದೇ ವೇಳೆ, ಬಿಜೆಪಿ ವಿರುದಟಛಿ ಹರಿಹಾಯ್ದ ಅವರು, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ ಎಂದು ಬೊಗಳೆ ಬಿಡುವ ಬಿಜೆಪಿ, ಕೇಂದ್ರದಲ್ಲಿ ಇಲ್ಲಿಯ ಯಾವೊಬ್ಬರಿಗೂ ಪ್ರಾತಿನಿಧ್ಯ ನೀಡಿಲ್ಲ.

ಮಹಾದಾಯಿ ಯೋಜನೆಗೆ ಪರಿಹಾರ ನೀಡುತ್ತಿಲ್ಲ. ಉತ್ತರ ಕರ್ನಾಟಕದ ಜನರನ್ನು ಮತ ನೀಡುವ ಕುರಿಗಳು ಎಂದು ಬಿಜೆಪಿ ಭಾವಿಸಿದೆ. ಆದ್ದರಿಂದ ಈ ಬಾರಿ ಉತ್ತರ ಕರ್ನಾಟಕದ ಜನರು ಹಿಂದೆ ಮಾಡಿದ ತಪ್ಪನ್ನು ಮತ್ತೂಮ್ಮೆ ಮಾಡದೆ ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಬರಲಿದೆ ಎಂಬ ಭ್ರಮೆ ತೋರಿಸಿ ಮತ ಪಡೆದ ಬಿಜೆಪಿ, ಕೇಂದ್ರದಲ್ಲಿ ಸರ್ಕಾರ ರಚಿಸಿದ ನಂತರ ಇದು ಕೇವಲ ಚುನಾವಣಾ ಭಾಷಣ ಎಂದು ಹೇಳಿ ಜನರ ಭಾವನೆಗಳೊಂದಿಗೆ ಆಟವಾಡಿತು ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next